ಮುಂಬಯಿ, ಆ.11: ಭಾರತ ರಾಷ್ಟ್ರದ ಸಹಕಾರಿ ರಂಗದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾಗಿ ಪುರಸ್ಕಾರ ಪಡೆದ ಭಾರತ್ ಕೋ.ಆಪರೇಟಿ ವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 98ನೇ ಶಾಖೆಯು ಇದೇ ಆ.17 ಬುಧವಾರ ಬೆಳಿಗ್ಗೆ ಬೋರಿವಲಿ ಪಶ್ಚಿಮದ ಐಸಿ ಕಾಲೋನಿ ಅಲ್ಲಿನ ಅಮಿ ಜ್ಹರೋಖಾ ಕಟ್ಟಡದ ನೆಲ ಮಹಡಿಯಲ್ಲಿ ಹಾಗೂ 99ನೇ ಶಾಖೆಯನ್ನು ಇದೇ ಆ.18 ಗುರುವಾರ ಬೆಳಿಗ್ಗೆ ಮಾಟುಂಗಾ (ಸೆಂಟ್ರಲ್ ರೈಲ್ವೇ) ಪೂರ್ವದ ಲಕ್ಷ್ಮೀನಾರಾಯಣ ಲೇನ್ ಅಲ್ಲಿನ ಜಮ್ನಾದಾಸ್ ಮೆನ್ಶನ್ ಕಟ್ಟಡಲ್ಲಿ ಶುಭಾರಂಭ ಗೊಳಿಸಲಾಗುವುದು ಎಂದು ಬ್ಯಾಂಕ್ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ತಿಳಿಸಿದ್ದಾರೆ.
Jaya C. Suvarna Rohini J. Salian C. R Mulky
ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಮತ್ತು ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ನೂತನ ಶಾಖೆಯನ್ನು ಸೇವಾರ್ಪಣೆ ಮಾಡಲಿದ್ದು, ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ. ಸಾಲಿಯಾನ್ ಬ್ಯಾಂಕ್ನ ವಿವಿಧ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಆ ಪ್ರಯುಕ್ತ ಮುಂಜಾನೆಯಿಂದ ವಾಸ್ತುಪೂಜೆ, ಗಣಹೋಮ, ಸತ್ಯನಾರಾಯಣ ಪೂಜೆ, ದ್ವಾರಪೂಜೆ ಇತ್ಯಾದಿ ಧಾರ್ಮಿಕ ಪೂಜಾಧಿಗಳು ನೆರವೇರಿಸಲಾಗುವುದು ಎಂದು ಬ್ಯಾಂಕ್ನ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ (ಉಪ ಪ್ರಧಾನ ಪ್ರಬಂಧÀಕ) ಈ ಮೂಲಕ ತಿಳಿಸಿದ್ದಾರೆ.
ಈ ಸಮಾರಂಭದಲ್ಲಿ ಬ್ಯಾಂಕ್ನ ಸರ್ವ ಗ್ರಾಹಕರು, ಶೇರುದಾರರು, ನೂತನ ಗ್ರಾಹಕರು ಮತ್ತು ಹಿತೈಷಿಗಳು ಆಗಮಿಸಿ ನೂತನ ಎರಡೂ ಶಾಖೆಗಳ ಯಶಸ್ವೀ ಸೇವೆ ಶುಭ ಕೋರುವಂತೆ ಬೋರಿವಲಿ ಶಾಖೆಯ ಮುಖ್ಯಸ್ಥೆ ರೇಖಾ ಎ.ಬಂಗೇರ ಹಾಗೂ ಮಾಟುಂಗಾ ಶಾಖೆಯ ಮುಖ್ಯಸ್ಥ ಅನೀಲ್ ವಿ.ಪೂಜಾರಿ ಈ ಮೂಲಕ ವಿನಂತಿಸಿದ್ದಾರೆ.