ಮುಂಬಯಿ, ಆ.11: ಕನ್ನಡ ಸಂಘ ಸಾಂತಾಕ್ರೂಜ್ (ರಿ). ಇದರ 59ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕ ವಿದ್ಯಾಥಿ೯ ವೇತನ ಕಾರ್ಯಕ್ರಮವು ಇದೇ ಆ.20ನೇ ಶನಿವಾರ ಸಂಜೆ 4:00 ಗಂಟೆಗೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಎಲ್.ವಿ ಅಮೀನ್ ಅಧ್ಯಕ್ಷತೆಯಲ್ಲಿ ಜರುಗಲಿದೆ.
L V Amin Sujata Shetty Santacruz
ಮಹಾಸಭೆಯಲ್ಲಿ ಸಂಘವು ವಾರ್ಷಿಕವಾಗಿ ನೀಡುವ 2016ನೇ ಸಾಲಿನ ವಿದ್ಯಾಥಿ ವೇತನ ವಿತರಣೆ, ದತ್ತು ಸ್ವೀಕೃತ ವಿದ್ಯಾಥಿ೯-ವಿದ್ಯಾಥಿ೯ನಿಯರ ಆಥಿ೯ಕ ಸಹಾಯನಿಧಿಯನ್ನು ದಾನಿಗಳ ಹಸ್ತದಿಂದ ವಿತರಿಸಲಾಗುವುದು. ಫಲಾನುಭವಿ ವಿದ್ಯಾಥಿರ್üಗಳು ತಮ್ಮ ಪೋಷಕರನ್ನು ಒಳಗೊಂಡು ಕ್ಲಪ್ತ ಸಮಯಕ್ಕೆ ಆಗಮಿಸಬೇಕು ಮತ್ತು ಸಂಘದ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆಯ ಯಶಸ್ವಿಗೆ ಸಹಕರಿಸುವಂತೆ ಸಂಘದ ಗೌ| ಪ್ರ| ಕಾರ್ಯದರ್ಶಿ ಶ್ರೀಮತಿ ಸುಜತಾ ಆರ್.ಶೆಟ್ಟಿ ಮತ್ತು ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್ ಮತ್ತು ಸರ್ವ ಪದಾಧಿಕಾರಿಗಳು ಈ ಮೂಲಕ ವಿನಂತಿಸಿದ್ದಾರೆ.