ಪಡುಬಿದ್ರಿ, ಆ.12: ದ.ಕ ಜಿಲ್ಲಾ ಮೊಗವೀರ ಮಹಾಜನ ಸಂಘದ ವ್ಯವಸ್ಥಾಪನಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಶ್ರೀ ವರಮಹಾಲಕ್ಷ್ಮೀ ವೃತ ಸೇವೆಯು ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ಜರಗಿತು.
ಸುಮಾರು 2 ಸಾವಿರಕ್ಕೂ ಮಿಕ್ಕಿದ ಭಕ್ತಾಧಿಗಳು ಸೇವಾ ಸಂದರ್ಭ ಪಾಲ್ಗೊಂಡಿದ್ದು, ಶ್ರೀ ಕ್ಷೇತ್ರದ ಅರ್ಚಕರಾದ ವೇ.ಮೂ. ರಾಘವೇಂದ್ರ ಉಪಾಧ್ಯಾಯ, ವಿಷ್ಣುಮೂರ್ತಿ ಉಪಾಧ್ಯಾಯ ಅವರು ಪೂಜಾ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಹೆಚ್. ಗಂಗಾಧರ್ ಹೊಸಬೆಟ್ಟು ಅವರು ಕೋಶಾಧಿಕಾರಿ ನಾಗೇಶ ಡಿ.ಬಂಗೇರ, ಜೊತೆ ಕಾರ್ಯದಶಿ ದಿನೇಶ್ ಆರ್.ಕೋಟ್ಯಾನ್, ಶ್ರೀ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ತಿಮ್ಮ ಮರಕಾಲ, ಕಾರ್ಯದರ್ಶಿ ಸತೀಶ್ ಆರ್.ಸಾಲ್ಯಾನ್, ಕೋಶಾಧಿಕಾರಿ ಪ್ರಶಾಂತ್ ಕಾಂಚನ್, ದ.ಕ. ಮೊಗವೀರ ಹಿತಸಾಧನಾ ವೇದಿಕೆಯ ಅಧ್ಯಕ್ಷ ಸರ್ವೋತ್ತಮ ಕುಂದರ್, ಮಹಾಲಕ್ಷ್ಮೀ ವಿದ್ಯಾಸಂಸ್ಥೆಯ ಸಂಚಾಲಕ ಶರತ್ ಗುಡ್ಡೆಕೊಪ್ಲ, ಮಹಿಳಾ ಸಂಘದ ಅಧ್ಯಕ್ಷೆ ಸರಳಾ ಬಿ.ಕಾಂಚನ್, ಉಪಾಧ್ಯಕ್ಷೆ ಗುಲಾಬಿ ಆರ್. ಕೋಟ್ಯಾನ್, ಕಾರ್ಯದರ್ಶಿ ಸೇವಂತಿಸದಾಶಿವ್, ಧನವತಿ, ವಾಸುದೇವ ಸಾಲ್ಯಾನ್, ವೇದವ್ಯಾಸ ಬಂಗೇರ, ಸುಧಾಕರ ಕರ್ಕೇರ,ವೈ.ಗಂಗಾಧರ ಸುವರ್ಣ, ಅರ್ಚಕ ವೃಂದ, ಸಿಬ್ಬಂದಿವರ್ಗ ಮತ್ತಿತರರು ಉಪಸ್ಥಿತರಿದ್ದರು.