ಮಂಗಳೂರು: ಮಂಗಳೂರಿನಿಂದ- ಬೆಂಗಳೂರು-ಹೊಸದಿಲ್ಲಿ, ಮಂಗಳೂರು - ಬೆಂಗಳೂರು ಹಾಗೂ ಮಂಗಳೂರು-ಪುಣೆಯನ್ನು ಸಂಪರ್ಕಿಸಲು ಹೊಸ ವಿಮಾನಯಾನ ಸೇವೆಯನ್ನು ಪ್ರಾರಂಭಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲು, ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಅಶೋಕ್ ಗಜಪತಿ ರಾಜು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ಮಂಗಳೂರು ನಗರ ಜಾಗತಿಕ ವಾಗಿ ಐತಿಹಾಸಿಕ ನಗರಿ ಎಂದು ಗುರುತಿಸಲ್ಪಟ್ಟಿದ್ದು, ಅನೇಕ ಬೃಹತ್ ಉದ್ದಿಮೆಗಳು, ಸಾಫ್ಟವೇರ್ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದು, ಶೆಕ್ಷಣಿಕವಾಗಿ ಮಹತ್ವ ಪಡೆದುಕೊಂಡಿ ರುವ ನಗರವಾಗಿದೆ. ಪ್ರತಿ ದಿನ ಸರಾಸರಿ 150-170 ಪ್ರಯಾಣಿಕರು ಮಂಗಳೂರಿನಿಂದ ಬೆಂಗಳೂರು ಮೂಲಕ ಹೊಸದಿಲ್ಲಿಗೆ, ಮಂಗಳೂರು-ಪುಣೆ ಹಾಗೂ ನಡುವೆ ಪ್ರಯಾಣಿಸುತ್ತಿದ್ದಾರೆ.
ಇಲ್ಲಿನ ಉದ್ಯಮಿಗಳು, ಕಾರ್ಪೊರೇಟ್ ಉದ್ಯೋಗಿಗಳು ಅಲ್ಲದೇ ದೇಶ ವಿದೇಶದ ಪ್ರವಾಸಿಗರು ವಿಮಾನ ಸೇವೆಗೆ ಬೇಡಿಕೆಯಿಟ್ಟಿದ್ದಾರೆ. ಈ ಹೊಸ ಸೇವೆ ಪ್ರಾರಂಭಿಸಿದಲ್ಲಿ ನಗರಗಳ ಸಂಪರ್ಕ ವೃದ್ಧಿಯಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಮನವಿಯಲ್ಲಿ ಆಗ್ರಹಿಸಿದ್ದಾರೆ