Friday 29th, March 2024
canara news

ಮಂಗಳೂರಿನಿಂದ ಹೊಸದಿಲ್ಲಿ-ಬೆಂಗಳೂರು- ಪುಣೆ ವಿಮಾನ ಸೇವೆಗೆ ಮನವಿ

Published On : 13 Aug 2016   |  Reported By : Canaranews Network


ಮಂಗಳೂರು: ಮಂಗಳೂರಿನಿಂದ- ಬೆಂಗಳೂರು-ಹೊಸದಿಲ್ಲಿ, ಮಂಗಳೂರು - ಬೆಂಗಳೂರು ಹಾಗೂ ಮಂಗಳೂರು-ಪುಣೆಯನ್ನು ಸಂಪರ್ಕಿಸಲು ಹೊಸ ವಿಮಾನಯಾನ ಸೇವೆಯನ್ನು ಪ್ರಾರಂಭಿಸುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲು, ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಅಶೋಕ್‌ ಗಜಪತಿ ರಾಜು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ಮಂಗಳೂರು ನಗರ ಜಾಗತಿಕ ವಾಗಿ ಐತಿಹಾಸಿಕ ನಗರಿ ಎಂದು ಗುರುತಿಸಲ್ಪಟ್ಟಿದ್ದು, ಅನೇಕ ಬೃಹತ್‌ ಉದ್ದಿಮೆಗಳು, ಸಾಫ್ಟವೇರ್‌ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದು, ಶೆಕ್ಷಣಿಕವಾಗಿ ಮಹತ್ವ ಪಡೆದುಕೊಂಡಿ ರುವ ನಗರವಾಗಿದೆ. ಪ್ರತಿ ದಿನ ಸರಾಸರಿ 150-170 ಪ್ರಯಾಣಿಕರು ಮಂಗಳೂರಿನಿಂದ ಬೆಂಗಳೂರು ಮೂಲಕ ಹೊಸದಿಲ್ಲಿಗೆ, ಮಂಗಳೂರು-ಪುಣೆ ಹಾಗೂ ನಡುವೆ ಪ್ರಯಾಣಿಸುತ್ತಿದ್ದಾರೆ.

ಇಲ್ಲಿನ ಉದ್ಯಮಿಗಳು, ಕಾರ್ಪೊರೇಟ್‌ ಉದ್ಯೋಗಿಗಳು ಅಲ್ಲದೇ ದೇಶ ವಿದೇಶದ ಪ್ರವಾಸಿಗರು ವಿಮಾನ ಸೇವೆಗೆ ಬೇಡಿಕೆಯಿಟ್ಟಿದ್ದಾರೆ. ಈ ಹೊಸ ಸೇವೆ ಪ್ರಾರಂಭಿಸಿದಲ್ಲಿ ನಗರಗಳ ಸಂಪರ್ಕ ವೃದ್ಧಿಯಾಗಲಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಮನವಿಯಲ್ಲಿ ಆಗ್ರಹಿಸಿದ್ದಾರೆ




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here