ಮಂಗಳೂರು: ೨೦೦೮ರಲ್ಲಿ ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿ ಶಿರಾಡಿಯಲ್ಲಿ ನಡೆದಿದ್ದ ತಾಯಿ ಮತ್ತು ಮಗುವಿನ ಬರ್ಬರ ಹತ್ಯೆಯನ್ನು ಘೋರ ಅಪರಾಧ ಎಂದು ಪರಿಗಣಿಸಿರುವ ಇಲ್ಲಿನ ೫ನೇ ಹೆಚ್ಚುವರಿ ನ್ಯಾಯಾಲಯ ಪ್ರಕರಣದ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ಆರೋಪಿ ಜಯೇಶ್ ನನ್ನು ಅಪರಾಧಿ ಎಂದು ಪರಿಗಣಿಸಿ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ಶಿರಾಡಿ ಗ್ರಾಮದ ಸಿರಿಬಾಗಿಲು ಪೊಲ್ಯೋಟ್ಟು ಎಂಬಲ್ಲಿ ೨೦೦೮ರ ಆಗಸ್ಟ್ ೨ರಂದು ತನ್ನ ದೊಡ್ಡಪ್ಪನ ಮಗ ಲೋಹಿತ್ ಯಾನೆ ಲವರವರ ಪತ್ನಿ ಸೌಮ್ಯ ಮತ್ತು ಆಕೆಯ ೩ ವರ್ಷದ ಗಂಡು ಮಗು ಜಿಷ್ಣು ಎಂಬವರನ್ನು ಕೊಲೆಗೈದಿರುವ ಆರೋಪಿ ಜಯೇಶ್ ಯಾನೆ ಜಯೇಶ್ ಕಾಂತ್ ಅಲಿಯಾಸ್ ಶಾಹಿರ್ ಅಲಿಯಾಸ್ ಅಪರಾಧಿ ಎಂದು ನ್ಯಾಯಾಲಯ ತೀರ್ಮಾನಿಸಿ ಮರಣದಂಡನೆಯ ತೀರ್ಪು ನೀಡಿದೆ.