Wednesday 24th, April 2024
canara news

ಎತ್ತಿನಹೊಳೆ: ಸೆ. 21ಕ್ಕೆ ಹಸಿರು ಪೀಠದಲ್ಲಿ ಅಂತಿಮ ವಾದ

Published On : 13 Aug 2016   |  Reported By : Canaranews Network


ಮಂಗಳೂರು: ಸು.ಕೋರ್ಟ್‌ನ ಹಸಿರು ಪೀಠದ ಪ್ರಧಾನ ಪೀಠದಲ್ಲಿ ಮಂಗಳವಾರ ಎತ್ತಿನಹೊಳೆ ಅರ್ಜಿ ವಿಚಾರಣೆ ನಡೆದು ಅಂತಿಮ ವಾದವನ್ನು ಸೆ. 21ರಂದು ಆಲಿಸುವುದಾಗಿ ನ್ಯಾಯಾಧೀಶರು ಮುಂದೂಡಿದ್ದಾರೆ.

ಪರಿಸರ ಹೋರಾಟಗಾರ ಕೆ.ಎನ್‌. ಸೋಮಶೇಖರ್‌, ತುಮಕೂರಿನ ಯತಿರಾಜು ಅವರು ಕರ್ನಾಟಕ ನೀರಾವರಿ ನಿಗಮದ ಎತ್ತಿನಹೊಳೆ ಯೋಜನೆ ವಿರುದ್ಧ ಸಲ್ಲಿಸಿದ ಅರ್ಜಿ ವಿಚಾರಣೆಗೆ ನ್ಯಾ| ಸ್ವತಂತ್ರಕುಮಾರ್‌ ಅಧ್ಯಕ್ಷತೆಯ ಪ್ರಧಾನ ಪೀಠಕ್ಕೆ ಸೋಮವಾರ ಬಂದಿತ್ತು. ಈ ಸಂದರ್ಭ ಮತ್ತೆ ಕರ್ನಾಟಕ ನೀರಾವರಿ ನಿಗಮ, ಕರ್ನಾಟಕ ಸರಕಾರದ ವಕೀಲರು ಅರ್ಜಿಯನ್ನು ಚೆನ್ನೈ ಪೀಠಕ್ಕೆ ವರ್ಗಾಯಿಸಬೇಕೆಂದು ಮನವಿ ಮಾಡಿದ್ದರು. ಆದರೆ ಈಗಾಗಲೇ ಚೆನ್ನೈ ಪೀಠದಿಂದ ಅರ್ಜಿದಾರರ ಕೋರಿಕೆ ಮೇರೆಗೆ ದಿಲ್ಲಿಯ ಪ್ರಧಾನ ಪೀಠಕ್ಕೆ ಬಂದಿದ್ದು, ಮರಳಿ ಚೆನ್ನೈಗೆ ಕಳುಹಿಸುವುದು ಅಸಾಧ್ಯ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಜತೆಗೆ ವಾದ ಮಂಡಿಸುವಂತೆ ಸೂಚನೆ ನೀಡಿ ಮಂಗಳವಾರ ವಿಚಾರಣೆ ಮುಂದುವರಿಯಲಿದೆ ಎಂದಿದ್ದರು.ಅದರಂತೆ ಮಂಗಳವಾರ ವಿಚಾರಣೆ ನಡೆಯಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here