ಕುಂದಾಪುರ, ಅ.16: ಭಾರತೀಯ ಕಥೊಲಿಕ್ ಯುವ ಸಂಚಾಲನ ಮತ್ತು – ವಾಯ್.ಸಿ.ಎಸ್. ಕುಂದಾಪುರ ಸಂಘಟನೆಗಳಿಂದ ಸ್ವಾತಂತ್ರ್ಯದ ಪ್ರಯುಕ್ತ ಸ್ವಚ್ಚತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿ ಕೊಂಡಿತು.
ಕುಂದಾಪುರ ಚರ್ಚಿನ ಸಹಾಯಕ ಗುರು ಇವರ ಮಾರ್ಗದರ್ಶನದಲ್ಲಿ , ಕುಂದಾಪುರ ಚರ್ಚಿನಿಂದ ಹೊರಟ ಯುವ ಸಂಚಾಲನ ಮತ್ತು ವಾಯ್.ಸಿ.ಎಸ್. ಸದಸ್ಯರಾದ ಸುಮಾರು 30 ಜನ ಯುವಕ ಮತ್ತು ಯುವತಿಯರು ಕುಂದಾಪುರದ ರಸ್ತೆಗಳಲ್ಲಿನ ಕಸ ಕಡ್ಡಿಗಳಗಳನ್ನು ಆರಿಸಿ ರಸ್ತೆಗಳನ್ನು ಸ್ವಚ್ಚ ಪಡಿಸಿತು.
ಸ್ವಚ್ಚತಾ ಅಭಿಯಾನ ಕಾರ್ಯವನ್ನು ನೋಡಿದ ಕೆಲ ಪೆÇಲೀಸ್ ಸಿಂಬದ್ದಿ ಈ ಕಾರ್ಯವನ್ನು ಶ್ಲಾಘಿಸಿತು. ಸಂಚಾಲನದ ಅಧ್ಯಕ್ಷ ಆಲ್ಡ್ರಿನ್ ಡಿಸೋಜಾ, ಕಾರ್ಯದರ್ಶಿ ವಿನಾರ್ಡ್ ಡಿಕೋಸ್ತಾ, ಸಂಚಾಲನದ ಪದಾಧಿಕಾರಿಗಳಾದ ಜೊಸ್ವಿನ್ ಕ್ರಾಸ್ತಾ, ಅಸ್ಮಿತಾ ಕೊರೆಯಾ, ನಿಖಿಲ್ ಬಾರೆಟ್ಟೊ, ಸಚೇತಕಿ ರೇಶ್ಮಾ ಫೆರ್ನಾಂಡಿಸ್ ಮುತಾಂದವರು ಈ ಸ್ವಚ್ಚತಾ ಕಾರ್ಯದಲ್ಲಿ ಪಾಲುಗೊಂಡರು.