ಮುಂಬಯಿ, ಆ.18: ಬಿಲ್ಲವರ ಅಸೋಸಿಯೇಶನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದೇಶದ 70ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಪ್ರಾರಂಬದಲ್ಲಿ ಪುರೋಹಿತ ವಿಶ್ವನಾಥ್ ಆಮೀನ್ ಗುರು ಪೂಜೆ ಮಾಡಿ ಪ್ರಾರ್ಥನೆ ಮಾಡಿದರು. ಸಭಾಗ್ರಹದಲ್ಲಿ ನೆರೆದಿದ್ದ ಗಣ್ಯರು, ಮಹಿಳೆಯರು , ಯುವಬ್ಯೂದಯ ಸಮಿತಿ ಸದಸ್ಯರು, ಮಕ್ಕಳು ದೇಶದ ಪ್ರಗತಿಗಾಗಿ ಗುರು ಸನ್ನಿಧಿಯಲ್ಲಿ ಪ್ರಾರ್ಥಿಸಿದರು.
ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿಯವರು ದ್ವಜಾರೋಹಣ ಮಾಡಿದರು. ನೆರೆದ ಎಲ್ಲರೂ ರಾಷ್ಟ್ರಗೀತೆ ಹಾಡಿ ದ್ವಜಕ್ಕೆ ವಂದನೆ ಸಲ್ಲಿಸಿದರು.
ಸಭಾ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿ, ಉಪ ಕಾರ್ಯಾಧ್ಯಕ್ಷರುಗಳಾದ ಚಂದ್ರಹಾಸ್ ಎಸ್.ಪಾಲನ್, ಸಿ.ಎನ್ ಕರ್ಕೇರ, ಉಪ ಕೋಶಾಧಿಕಾರಿ ಆಶೀಶ್ ಆರ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರವಿ ಎಸ್.ಸನೀಲ್ ಸ್ವಾಗತಿಸಿ ಸ್ವತಂತ್ರ ದಿನಾಚರಣೆಯ ಸುಭಾಶಯ ನೀಡಿದರು.
ಈ ಸಂದರ್ಭದಲ್ಲಿ ಈಶ್ವ್ವರ್ ಕೋಟ್ಯಾನ್, ಆಶೀಶ್ ಆರ್.ಕೋಟ್ಯಾನ್ ಮತ್ತು ನವಿಶ್ ಅವಿೂನ್ ಸಮಯೋಚಿತವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ದೇವರಾಜ್ ಪೂಜಾರಿ ಮಾತನಾಡಿ ನಾವೆಲ್ಲರೂ ಶಿಸ್ತು ಬದ್ದ ರಾಗಿ ದೇಶದ ಸೇವೆ ಮಾಡೋಣ ಎಂದು ಯುವಕರಿಗೆ ಕರೆ ನೀಡಿದರು.
ಜೊತೆ ಕಾರ್ಯದರ್ಶಿ ನವಿಶ್ ಆಮೀನ್ ಕಾರ್ಯಕ್ರಮ ನಿರೂಪಿಸಿದರು. ಗೌ| ಕಾರ್ಯದರ್ಶಿ ಪುರಂದರ್ ಪೂಜಾರಿ ಅಸೋಸಿಯೇಶನ್ನ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿ ವಂದನಾರ್ಪಣೆ ಸಲ್ಲಿಸಿದರು.