ಮಂಗಳೂರು: ಜುಗಾರಿ ಅಡ್ಡೆಗೆ ದಾಳಿ ನಡೆಸಿದ ವಿಟ್ಲ ಪೊಲೀಸ್ ಎಸೈ ಹಾಗೂ ಪೊಲೀಸರ ತಂಡ ಐವರು ಆರೋಪಿಗಳನ್ನು ಬಂಧಿಸಿ ನಗದು ವಶಕ್ಕೆ ಪಡೆದ ಘಟನೆ ಬಿ.ಸಿ.ರೋಡ್ ಸಮೀಪದ ಮಾಣಿ ಸಂತ ಬಳಿ ನಡೆದಿದೆ.ಮಾಣಿ ನಿವಾಸಿಗಳಾದ ಮುತ್ತ ಬೈರ(೩೮), ಸೀನಪ್ಪ ಗೌಡ(೬೦), ಕಡೇಶ್ವಾಲ್ಯ ನಿವಾಸಿ ಸುರೇಂದ್ರ ನಾಯ್ಕ(೩೨) ಬರಿಮಾರು ನಿವಾಸಿ ಮೋಹನದಾಸ(೨೯) ಪೆರಾಜೆ ನಿವಾಸಿ ಜಿನ್ನಪ್ಪ ಪೂಜಾರಿ(೫೭) ಬಂಧಿತ ಆರೋಪಿಗಳು.
ಮಾಣಿ ಸಂತೆಯ ಬಳಿಯಲ್ಲಿ ಜುಗಾರಿ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದಾಗ ನಗದು ಪತ್ತೆಯಾಗಿದೆ. ವಿಟ್ಲ ಪೊಲೀಸ್ ಠಾಣೆಯ ಎಸೈ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಜಯಕುಮಾರ್, ರಕ್ಷಿತ್ ರೈ, ರಮೇಶ್, ಹರಿಶ್ಚಂದ್ರ , ಶ್ರೀಧರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.