ಮುಂಬಯಿ,ಆ.26: ಕೇರಳದ ಕಾಸರಕೋಡ್ನ ಮಳ್ಹರ್ ನೂರುಲ್ಇಸ್ಲಾಮಿಯದ ಮುಂಬಯಿ ಘಟಕದ ವತಿಯಿಂದ ಮಾಸಿಕ ನಡೆಸಿ ಬರುವ ಸ್ವಲಾತ್ ಮಜ್ಲಿಸ್ ಹಾಗೂ ಮಳ್ಹರ್ ನೂರುಲ್ ಇಸ್ಲಾಮಿಯದ ಶಿಲ್ಪಿ ಪೊಸೊಟ್ ತಂಙಳ್ ಪ್ರಥಮ ಉರೂಸ್ನ ಪ್ರಚಾರರ್ಥ ಸಮ್ಮೇಳನ ದಾದರ್ (ಪೂರ್ವ) ಸುನ್ನಿ ಮಸೀದಿಯಲ್ಲಿ ಇತ್ತೀಚೆಗೆ ನಡೆಯಲಿದೆ.
ಮಳ್ಹರ್ ನೂರುಲ್ಇಸ್ಲಾಮಿಯದ ಆಧ್ಯಕ್ಷ ಸಯ್ಯದ್ ಇಬ್ರಾಹೀಂ ಖಲೀಲುಲ್ ಬುಖಾರಿ ಕಡಲುಂಡಿ ತಂಙಳ್ ಕಾರ್ಯಕ್ರಮದ ನೇತೃತ್ವ ವಹಿಸಿದರು. ಮುಫ್ತಿ ರಫೀಕ್ ಸಅದಿ, ಮೊಹಮ್ಮದ್ ಅಕ್ತರ್ ಅಲ್-ಖಾದ್ರಿ, ಹಸನ್ ಮುಸ್ಲಿಯಾರ್ ಮುಂಬ್ರಾ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು. ಮಳ್ಹರ್ ನೂರುಲ್ ಇಸ್ಲಾಮಿಯದ ಮುಂಬಯಿ ಘಟಕದ ಮುಖ್ಯಸ್ಥ ಸಿದ್ದೀಕ್ ಮುಸ್ಲಿಯಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.