ಮುಂಬಯಿ, ಆ.26: ಜಿ.ಎಸ್.ಬಿ. ಸಭಾ ಮಲಾಡ್ ಕಾಂದಿವಲಿ ಇವರ ವತಿಯಿಂದ 6ನೇ ವಾರ್ಷಿಕ ಸಮ್ಮೇಳನವು ಕಳೆದ ಭಾನುವಾರ ಮಲಾಡ್ ಪಶ್ಚಿಮದ ಉಷ್ಮಾನಗರದಲ್ಲಿನ ಉಜ್ವಾಲ್ ನಂದದೀಪ ಸಭಾಗೃಹದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ನೇರವೇರಿಸಲ್ಪಟ್ಟಿತು.
ಡಾ| ವಿ.ವಿ ಶೆಣೈ ಅವರ ನೇತೃತ್ವದಲ್ಲಿ ದತ್ತಾತ್ರೇಯ ಶಾನ್ಬಾಗ್ ಅವರ ಯಜಮಾನತ್ವದಲ್ಲಿ ಪೂಜಾಧಿಗಳು ನೆರವೇರಿದವು. ಸಮಿತಿ ಸದಸ್ಯ ಅಂಕಿತಾ ಭಟ್, ವಿ.ಎನ್ ಕುಡ್ವಾ, ಪಿ.ವಿ ಶೆಣೈ ಹಾಗೂ ಸುರೇಶ ಪ್ರಭು ಅವರು ಕಾರ್ಯಕ್ರಮಗಳನ್ನು ನೇರವೇರಿಸಿದರು.
ರಾಘವೇಂದ್ರ ಮಲ್ಯ ಅವರ ನೇತೃತ್ವದಲ್ಲಿ ನೇರವೇರಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯಾವಳಿಗಳನ್ನು ಪ್ರದರ್ಶಿಸಿದರು. ವಸುಧಾ ಪ್ರಭು ರಚಿತ ಕೊಂಕಣಿ ಅಮ್ಮಿ ಅಮ್ಮಿ ಗೆಲೆ ಎಂಬ ಚುಟುಕು ಕಾರ್ಯಕ್ರಮ ಅಕ್ಷತಾ ಮಲ್ಯ ಹಾಗೂ ಚರಿತಾ ಮಲ್ಯ ಸಾದರ ಪಡಿಸಿದರು.
ಈ ಸಂದರ್ಭದಲ್ಲಿ ಸುಮಾರು 60 ವರ್ಷಗಳಿಂದ ನಿಸ್ವಾರ್ಥ ಭಾವನೆಯಿಂದ ಅಂತಿಮ ಸಂಸ್ಕಾರದ ವಿಧಿಯನ್ನು ನಡೆಸಿಕೊಂಡು ಬಂದಿರುವ ಕೇಶವ ರಾಮಚಂದ್ರ ಪೈ ಮತ್ತು ವಾಸುದೇವ ಪ್ರಭು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಾ ಆರತಿ, ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಗೊಂಡಿತು.