ಮೈಸೂರು ಅಸೋಸಿಯೇಶನ್ನಲ್ಲಿ ಹರಿದಾಸ ಸಾಹಿತ್ಯ-ಭಕ್ತಿ ಸಂಗೀತ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಆ.27: ಬಿ.ಆರ್ ರೆಸ್ಟೋರೆಂಟ್ ಹೊಟೇಲು ಸಮೂಹ ಮುಂಬಯಿ ಮತ್ತು ಇಂಟರ್ನ್ಯಾಶನ ಲ್ ಇನ್ಸ್ಟಿಟ್ಯೂಟ್ ಟ್ರೇನಿಂಗ್ ಸೆಂಟರ್ (ಐಐಟಿಸಿ) ಹಾಗೂ ಮೈಸೂರು ಅಸೋಸಿಯೇಶನ್ ಮುಂಬಯಿ ಸಹಯೋಗದೊಂದಿಗೆ ಧರ್ಮಾರ್ಥವಾಗಿ ಮಾಟುಂಗ (ಸೆಂಟ್ರಲ್ ರೈಲ್ವೇ) ಪೂರ್ವದಲ್ಲಿನ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಕಳೆದ ಶುಕ್ರವಾರ ಸಂಜೆ ಶ್ರೀ (ಡಾ|) ವಿದ್ಯಾಭೂಷಣ ಬಳಗದ ಭಕ್ತಿಗಾನ ಸುಧೆ ಕಾರ್ಯಕ್ರಮ ಆಯೋಜಿಸಿತ್ತು.
ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರಾದ ಐಐಟಿಸಿ ಸಂಸ್ಥೆಯ ಸಂಸ್ಥಾಪಕ ಎಸ್.ಕೆ ಉರ್ವಾಳ್ ಮತ್ತು ಪ್ರಫುಲ್ಲಾ ಎಸ್.ಉರ್ವಾಳ್, ನಿರ್ದೇಶಕ ವಿಕ್ರಾಂತ್ ಉರ್ವಾಳ್ ಹಾಗೂ ಬಿ.ಆರ್ ರೆಸ್ಟೋರೆಂಟ್ ಹೊಟೇ ಲು ಸಮೂಹದ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ಮತ್ತು ಹಾಗೂ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಕೆ.ಮಂಜುನಾಥಯ್ಯ ಅವರು ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ, ಗಾನಗಂಧರ್ವ ಬಿರುದಾಂಕಿಕ ಶ್ರೀ ವಿದ್ಯಾಭೂಷಣ ಅವರಿಗೆ ಸನ್ಮಾನಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ ಬಳಗವು ಹರಿದಾಸ ಸಾಹಿತ್ಯದ ಭಕ್ತಿಗಾನ ಸುಧೆ ಪ್ರಸ್ತುತ ಪಡಿಸಿದರು. ಎಸ್.ಪ್ರದೇಶ್ ಆಚಾರ್ಯ (ವಾಯೋಲಿನ್), ಕೆ. ವೆಂಕಟೇಶ್ (ಘಟಾಂ) ಮತ್ತು ಎಂ.ಆರ್ ಸಾಯಿನಾಥ್ (ಮೃದಂಗ) ಸಂಗೀತ ಸಾಧÀನಗಳಲ್ಲಿ ಸಹಕರಿಸಿದರು.