ಮಂಗಳೂರು: ಮನೆಗೆ ನುಗ್ಗಿರುವ ಕಳ್ಳರು ೨.೭೫ ಲಕ್ಷ ನಗದು ಕಳವುಗೈದಿರುವ ಘಟನೆ ಮಂಗಳೂರು ಹೊರವಲಯದ ಕೊಣಾಜೆ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಸಮೀಪ ಸಂಭವಿಸಿದೆ.ನಾಟೆಕಲ್ ಸಮೀಪ ಇರುವ ಖಲೀಲ್ ಚಿಕನ್ ಸ್ಟಾಲ್ ಮಾಲಿಕ ಅಬ್ದುಲ್ ಕರೀಮ್ ಎಂಬವರ ಮನೆಯಲ್ಲಿ ಕಳವು ನಡೆದಿದೆ.
ಶುಕ್ರವಾರ ತಡರಾತ್ರಿ ವೇಳೆ ಮನೆಯ ಹಿಂಬಾಗಿಲ ಚಿಲಕವನ್ನು ಕಿಟಕಿ ಮೂಲಕ ತೆರೆದು ಒಳನುಗ್ಗಿರುವ ಕಳ್ಳರು ಮನೆಯ ಎಲ್ಲಾ ಕೋಣೆಗಳಲ್ಲಿ ಜಾಲಾಡಿ ನಂತರ ಮನೆ ಛಾವಣಿಯಲ್ಲಿದ್ದ ಡ್ರಾವರ ನ್ ಕೀ ತೆಗೆದ ಕಳ್ಳರು ಅದರಲ್ಲಿದ್ದ ೨.೭೫ ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಘಟನೆ ಕುರಿತಂತೆ ಕೊಣಾಜೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.