ಮುಂಬಯಿ, ಸೆ.05: ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಸಂಸ್ಥೆಯ ವತಿಯಿಂದ ಅಸೋಸಿಯೇಶನ್ನ ಭವನದಲ್ಲಿನ ಮಂದಿರದಲ್ಲಿ ಸ್ವರ್ಣ ಗೌರಿ ಮತ್ತು ಶ್ರೀ ಮಹಾಗಣಪತಿ ಪೂಜಾ ಮಹೋತ್ಸವ ಆಚರಿಸÀಲಾಯಿತು. ಪುರೋಹಿತ ಸುರೇಶ್ ಭಟ್ ಪೂಜಾಧಿಗಳನ್ನು ನೆರವೇರಿಸಿ ಹರಸಿದರು. ಆರ್ ಶ್ರೀಧರ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್ನ ವ್ಯಸ್ಥಾಪಕ ಬಿ.ಕೆ ಮಧುಸೂದನ್, ಭವಾನಿ ಭರ್ಗವ್, ಜಿ.ಎಸ್ ನಾಯಕ್, ಉಮೇಶ್ ದೇವಾಡಿಗ, ಉದಯ್ ಪೂಜಾರಿ, ಸದಸ್ಯರನೇಕರು ಉಪಸ್ಥಿತರಿದ್ದರು.