ಮುಂಬಯಿ, ಸೆ.08: ಜಿ.ಎಸ್ ಬಿ ಸೇವಾ ಮಂಡಲ ಕಿಂಗ್ಸರ್ಕಲ್ ಇಲ್ಲಿನ ಸಾರ್ವಜನಿಕ ಗಣೇಶೋತ್ಸವಕ್ಕೆ ಬಂಟ್ವಾಳ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ ಇಂದಿಲ್ಲಿ ಗುರುವಾರ ಭೇಟಿ ನೀಡಿ ಅಲ್ಲಿ ಪೂಜಿಸಲ್ಪಡುವ ಶ್ರೀ ಗಣಪತಿ ದರ್ಶನಗೈದು ಪೂಜೆ ಸಲ್ಲಿಸಿದರು.
ಗಣೇಶೋತ್ಸವ ಉತ್ಸವ ಸಮಿತಿ ಪದಾಧಿಕಾರಿಗಳು, ಪುರೋಹಿತರು ಶ್ರೀಗಳಿಗೆ ಪ್ರಸಾದ ಪ್ರದಾನಿಸಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಶ್ರೀಗಳ ಜೊತೆ ಸಮಾಜ ಸೇವಕ ಭಾಸ್ಕರ್ ಶೆಟ್ಟಿ ಪುಣೆ, ಉದ್ಯಮಿಗಳಾದ ರಾಜೇಶ್ ಪಾಟೀಲ್, ರಾಜೇಂದ್ರ ದೇವಾಡಿಗï, ವಸಂತ್ ಭಟ್, ಕೃಷ್ಣ ಬಂಜನ್ ಉಪಸ್ಥಿತರಿದ್ದರು.