ಕುಂದಾಪುರ, ಸೆ.14: ಉಪನಿರ್ದೇಶಕರು, ಪದವಿ ಪೂರ್ವ ಹಾಗೂ ವ್ರತ್ತಿ ಶಿಕ್ಷಣ ಇಲಾಖೆ ಉಡುಪಿ ವತಿಯಿಂದ, ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಇದರ ಆಶ್ರಯದಲ್ಲಿ ಕುಂದಾಪುರದಲ್ಲಿ ನೆಡೆಯುವ ಪ.ಪೂ. ಕಾಲೇಜುಗಳ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದ ಬಗ್ಗೆ ಪೂರ್ವಭಾವಿ ಸಭೆ ಸಂತ ಮೇರಿಸ್ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನೆಡೆಯಿತು.
ಇದರ ಅಧ್ಯಕ್ಷತೆಯನ್ನು ಹೋಲಿ ರೊಜರಿ ಇಗರ್ಜಿಯ ಶಿಕ್ಷಣ ಸಮೂಹ ಸಂಸ್ಥೆಗಳ ಸಂಚಾಲಕರಾದ ವ|ಧರ್ಮಗುರು ಅನಿಲ್ ಡಿಸೋಜಾ ಇವರು ವಹಿಸಿ ‘ಒಳ್ಳೆಯ ಕಾರ್ಯಗಳಿಗೆ ದೇವರು ಸದಾ ಆಶಿರ್ವಾದಿಸುತ್ತಾರೆ, ಉತ್ತಮ ಶಿಕ್ಷಣ ಮಾತ್ರವಲ್ಲ ನಾವು ಕ್ರೀಡೆಗೂ ಪೆÇ್ರೀತ್ಸಾಹ ನೀಡುತ್ತೆವೆ, ಹಾಗಾಗಿ ಈ ಜಿಲ್ಲಾ ಕ್ರೀಡಾಕೂಟ ಉತ್ತಮ ರೀತಿಯಲ್ಲಿ ನೆಡೆಸಿಕೊಡುತ್ತೆವೆ’ ಎನ್ನುತ್ತಾ ಅವರು ಕ್ರೀಡಕೂಟಕ್ಕೆ ಶುಭ ಕೋರಿದರು.
ಪ್ರಾಶುಪಾಲರಾದ ವ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ‘ಸ್ವಾಗತಿಸಿ ನಮ್ಮ ಶಾಲಾ ಮಂಡಳಿ ಸಂತೊಷದಿಂದ ಈ ಕ್ರೀಡಾಕೂಟ ನೆಡೆಸಲು ಅನುಮತಿ ನೀಡಿದೆ, ಅನ್ನುತ್ತಾ ಅಧಿಕಾರಿಗಳ ದೈಹಿಕ ಶಿಕ್ಷರ ಸಹಕಾರ ಕೋರಿದರು. ಕುಂದಾಪುರ ಪುರಸಭೆ ಉಪಾಧ್ಯಕ್ಷ, ಈ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ ರಾಜೇಶ್ ಕಾವೇರಿ ಕಾರ್ಯಕ್ರಮವನ್ನು ಉದ್ಘಾಟಿಸಿ ‘ಇವತ್ತು ಈ ಶಿಕ್ಷಣ ಸಂಸ್ಥೆಗಳು ಕ್ರೀಡೆಗಾಗಿ ತುಂಬ ಉತ್ತೇಜ ನೀಡುವುದು ಉತ್ತಮ ಸಂಗತಿ’ ಎನ್ನುತ್ತಾ ಕ್ರೀಡಾಕೂಟಕ್ಕೆ ಸಹಕಾರದ ಭರವಶೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಆರ್.ಬಿ. ನಾಯಕ್ ‘ಈ ಕ್ರೀಡಾ ಕೂಟವನ್ನು ನೆಡೆಸಿಕೊಡಲು ಪ್ರಾಂಶುಪಾಲರು, ಆಡಳಿತ ಮಂಡಳಿ, ಕೇವಲ ಅರ್ದ ಗಂಟೆಯ ಒಳಗೆ ಒಪ್ಪಿಗೆ ಕೊಟ್ಟಿದು ಬಹಳ ಸಂತೊಷದ ಸಂಗತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ.ಪೂ.ಶಿ.ಇಲಾಖೆ ದೈಹಿಕ ಶಿಕ್ಷಣ ಸಂಯೋಜಕರಾದ ಶ್ರೀಧರ್ ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಪ.ಪೂ.ಶಿ.ಇಲಾಖೆ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರು ಶರತ್ ಶೆಟ್ಟಿ, ಉಪಾಧ್ಯಕ್ಶರು ಬಾಲಕ್ರಷ್ಣ ಶೆಟ್ಟಿ, ಪ.ಪೂ.ಶಿ.ಇಲಾಖೆ ದೈಹಿಕ ಶಿಕ್ಷಣ ಗೌರವಾಧ್ಯಕ್ಷರು ವಸಂತ ಶೆಟ್ಟಿ, ಸಂತ ಮೇರಿಸ್ ಪ.ಪೂ.ಕಾಲೇಜಿನ ಉಪ ಪ್ರಾಂಶುಪಾಲೆ ಮಂಜುಳಾ ನಾಯರ್, ಸಮುಹ ಶಿಕ್ಷಣ ಸಂಸ್ಥೆಗಳ ಮುಖ್ಯೊಪಾಧ್ಯಾನಿಯರಾದ ಸಿಸ್ಟರ್ ಜೊಯ್ಸಿಲಿನ್, ಡೋರತಿ ಸುವಾರಿಸ್ ವೇದಿಕೆಯಲ್ಲಿ ಹಾಜರಿದ್ದ ಈ ಸಭೆಯಲ್ಲಿ ಸುಮಾರೊ 30 ದೈಹಿಕ ಶಿಕ್ಷರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕ ನಾಗರಾಜ್ ಶೆಟ್ಟಿ ನಿರ್ವಹಿಸಿದರು. ಶಿಕ್ಷಕ ಚಂದ್ರಶೇಖರ ಶೆಟ್ಟಿ ಧನ್ಯವಾದಗಳನ್ನು ಅರ್ಪಿಸಿದರು.