ಮುಂಬಯಿ, ಸೆ.14: ಮುಂಬಯಿಯಾದ್ಯಂತ ಅದ್ದೂರಿಯಾಗಿ ಸಂಭ್ರಮಿಸಲ್ಪಟ್ಟ ಗಣೇಶ ಚತುಥಿ೯ ಸಂಭ್ರಮ ಇಂದು ಅನಂತ ಚತುರ್ಧಶಿ ದಿನ (ಸೆ.15) ಗುರುವಾರ ತೆರೆಕಾಣಲಿದೆ.
ಮಹಾನಗರದಲ್ಲಿನ ವಿವಿಧ ತುಳುಕನ್ನಡಿಗ ಸಂಸ್ಥೆಗಳು ವಾರ್ಷಿಕ ಚೌತಿಹಬ್ಬವನ್ನು ವಿಜೃಂಭನೆಯಿಂದ ನೆರವೇರಿಸಿದ್ದು, ತುಳು ಕನ್ನಡಿಗ ಮುಂದಾಳುತ್ವದ ಸಾಂತಕ್ರೂಜ್ ಪೂರ್ವದ ವಕೋಲಾ ಬ್ರಿಡ್ಜ್ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ಈ ಬಾರಿ ಸ್ವರ್ಣಮಹೋತ್ಸವ ಸಂಭ್ರಮದೊಂದಿಗೆ 2016ನೇ ವಾರ್ಷಿಕ ಗಣೇಶೋತ್ಸವ ಸಂಭ್ರಮಿಸಿತು.