ಮಂಗಳೂರು: ಎರಡು ಮನೆಗಳಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆಗೆ ನುಗ್ಗಿ ಸಾವಿರಾರು ರೂ. ನಗದನ್ನು ದೋಚಿದ ಘಟನೆ ವಿಟ್ಲ ಪುಣಚ ಗ್ರಾಮದಲ್ಲಿ ನಡೆದಿದೆ. ಪುಣಚ ಗ್ರಾಮದ ಪಾಲತ್ತಡ್ಕ ನಿವಾಸಿ ನಾಸೀರ್ ಮಹಮ್ಮದ್ ಅವರು ತಮ್ಮ ನೆಂಟರ ಮನೆಗೆ ತೆರಳಿದ್ದರು.
ಅದೇ ರೀತಿ ಪುಣಚ ಗ್ರಾಮದ ಪರಿಯಾಲ್ತಡ್ಕ ನಿವಾಸಿ ಮಹಮ್ಮದ್ ಅವರು ಮಗಳ ಮನೆಗೆ ತೆರಳಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮುಂದಾಗಿದ್ದಾರೆನ್ನಲಾಗಿದೆ. ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟನ್ನು ತೆರೆದು ಚಿನ್ನಾಭರಣಕ್ಕಾಗಿ ಶೋಧಿಸಿದ್ದಾರೆ. ನಾಸೀರ್ ಮಹಮ್ಮದ್ ಅವರ ಮನೆಯಿಂದ ೫ ಸಾವಿರ ಹಾಗೂ ಮಹಮ್ಮದ್ ಅವರ ಮನೆಯಿಂದ ೯ ಸಾವಿರ ರೂಪಾಯಿ ಸೇರಿ ಒಟ್ಟು ೧೪ ಸಾವಿರ ರೂಪಾಯಿ ಹಣವನ್ನು ದೋಚಿದ್ದಾರೆ. ವಿಟ್ಲ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.