Wednesday 24th, April 2024
canara news

ಕಾವೇರಿ ಗಲಬೆ : ಗಾಯಾಳುವಿನ ಮನೆಗೆ ಜಯಪ್ರಕಾಶ್ ಹೆಗ್ಡೆ ಭೇಟಿ

Published On : 24 Sep 2016   |  Reported By : Bernard J Costa


ತಮಿಳುನಾಡಿನಲ್ಲಿ ಕಾವೇರಿ ವಿವಾದದ ಕುರಿತಾಗಿ ನಡೆದ ಪ್ರತಿಭಟನೆಯ ವೇಳೆ ಹಲ್ಲೆಗೊಳಗಾದ ಉಡುಪಿ ಜಿಲ್ಲೆಯ ಅಮಾಸೆಬೈಲಿನ ಮಂಜುನಾಥ ಕುಲಾಲರವರ ಮನೆಗೆ ಇಂದು ಬೆಳಿಗ್ಗೆ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆಯವರು ಭೇಟಿ ನೀಡಿ ಗಾಯಾಳುವನ್ನು ಭೇಟಿ ಮಾಡಿ ಮುಂದೆ ಬೇಕಾಗಿರುವ ಯಾವುದೇ ತರನಾದ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗೆ ತನ್ನನ್ನು ಸಂಪರ್ಕಿಸುವಂತೆ ತಿಳಿಸಿ ನಡೆದ ಘಟನೆಯ ಕುರಿತು ರಾಜ್ಯಗಳ ಆಡಳಿತಾತ್ಮಕ ಸಮಸ್ಯೆಗಳ ವಿಚಾರದಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಸುವುದು ವಿಷಾದನೀಯ.

ನಮ್ಮ ರಾಜ್ಯದವರು ಬೇರೆ ಬೇರೆ ರಾಜ್ಯಗಳಲ್ಲಿ, ದೇಶಗಳಲ್ಲಿ ಇರುವಂತೆಯೇ ಬೇರೆ ಬೇರೆ ರಾಜ್ಯದವರು ಹಾಗೂ ಬೇರೆ ಬೇರೆ ದೇಶದವರು ನಮ್ಮ ರಾಜ್ಯದಲ್ಲಿಯೂ ಕೂಡಾ ಇದ್ದಾರೆ, ಒಕ್ಕೂಟ ವ್ಯವಸ್ಥೆಯಲ್ಲಿ ಪರಸ್ಪರ ಮಾತುಕತೆಯಿಂದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕೇ ಹೊರತು ಇಂತಹ ಹಲ್ಲೆಗಳು ಖಂಡನೀಯ ಎಂದರು. ಈ ಸಂದರ್ಭದಲ್ಲಿ ಅಜಿತ್ ಕುಮಾರ್ ಶೆಟ್ಟಿ ರಟ್ಟಾಡಿ, ಚಂದ್ರಶೇಖರ ಶೆಟ್ಟಿ, ಕೃಷ್ಣ ಪೂಜಾರಿ ಸಿದ್ಧಾಪುರ, ಲಕ್ಷ್ಮಣ ಕುಲಾಲ, ದೀಪಕ್ ನಾವುಂದ, ಪ್ರಕಾಶ ಹೆಗ್ಡೆ, ಗಣೇಶ್, ಪ್ರತೀಕ್ ಶೆಟ್ಟಿ, ಕರ್ನಾಟಕ ವಿದ್ಯಾರ್ಥಿ ಪರಿಷತ್‍ನ ಜಿಲ್ಲಾಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ಕುಂದಾಪುರ ಘಟಕದ ಸಂಚಾಲಕ ಗಿರೀಶ್ ಜಿ.ಕೆ, ಕೋಟ ಘಟಕದ ನಾಗೇಂದ್ರ ಪುತ್ರನ್, ಲಕ್ಷ್ಮೀ ರಾಜೇಶ ಶೆಟ್ಟಿ, ಸಮಾಜಸೇವಕ ಜಪ್ತಿ ಚಂದ್ರಶೇಖರ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here