ಮಂಗಳೂರು: ಚಿಲ್ಲರೆ ಹಣದ ವಿಚಾರವಾಗಿ ಪ್ರಯಾಣಿಕ ಯುವತಿಯೊಬ್ಬಳೊಂದಿಗೆ ನಡೆದ ವಿವಾದದ ಬಳಿಕ ನದಿಗೆ ಬಸ್ ನಿರ್ವಾಹಕನ ಮೃತದೇಹ ಬುಧವಾರ ಸುಬ್ರಹ್ಮಣ್ಯದಲ್ಲಿ ಪತ್ತೆಯಾಗಿದೆ. ಸಾರಿಗೆ ಬಸ್ ನಿರ್ವಾಹಕ ಮಂಗಳೂರಿನ ಗುರುಪುರ ಕೈಕಂಬ ನಿವಾಸಿ ದೇವದಾಸ್(೪೮) ಸೆ.೨೫ ಸುಬ್ರಹ್ಮಣ್ಯ ಕುಮಾರಧಾರಾ ನದಿಯ ಸೇತುವೆಯ ಮೇಲಿಂದ ಹಾರಿದವರು ಬಳಿಕ ನಾಪತ್ತೆಯಾಗಿದ್ದರು.
ಅವರಿಗಾಗಿ ಮೂರು ದಿನಗಳಿಂದ ತೀವ್ರ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಇಂದು ಬೆಳಗ್ಗೆಯಿದ ಮತ್ತೆ ಶೋಧ ಮುಂದುವರಿಸಿದಾಗ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟಕ್ಕಿಂತ ಎರಡು ಕಿ.ಮೀ ದೂರ ಭಟ್ಟಕೆರೆಯ ಎಂಬಲ್ಲಿ ಮೃತದೇಹ ಪತ್ತೆಯಾಗಿದೆ.ಸುಳ್ಯ ಠಾಣೆಯಲ್ಲಿ ಪ್ರಕರಣದ ಕುರಿತು ವಿಚಾರಣೆ ಮುಂದುವರಿದಿದೆ.