ಮುಂಬಯಿ, ಸೆ.29: ದಿ.ಮಹಾರಾಷ್ಟ್ರ ಸ್ಟೇಟ್ ಕೋ.ಅಪರೇಟಿವ್ ಬ್ಯಾಂಕ್'ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆಯಿಂದ `ಉತ್ಕೃಷ್ಟ ಬ್ಯಾಂಕ್' ಪುರಸ್ಕೃತ ಹಾಗೂ ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್'ಸ್ನಿಂದ `ಶ್ರೇಷ್ಠ ಬ್ಯಾಂಕ್' ಪ್ರಶಸ್ತಿ ವಿಜೇತ ಮೊಡೇಲ್ ಕೋ.ಆಪರೇ ಟಿವ್ ಬ್ಯಾಂಕ್ ಲಿಮಿಟೆಡ್ ತನ್ನ 20ನೇ ನೂತನ ಶಾಖೆಯನ್ನು ಅಕ್ಟೋಬರ್.01ನೇ ಶನಿವಾರ ಪೂರ್ವಾಹ್ನ 10.30 ಗಂಟೆಗೆ ಭಯಂದರ್ ಪಶ್ಚಿಮದ ಪಾಠಕ್ ರಸ್ತೆಯ ಸಲ್ಸಾರ್ ಟವರ್ ಮುಂಭಾಗದಲ್ಲಿನ ಕಮಥಿüೀಯ ಭವನ ಕಟ್ಟಡದಲ್ಲಿ ಉದ್ಘಾಟಿಸಲಿದೆ.
ಬ್ಯಾಂಕ್ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿ'ಸೋಜಾ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನಾ ಸಮಾರಂಭದಲ್ಲಿ ಭಯಂದರ್ ಪಶ್ಚಿಮದಲ್ಲಿನ ಅವರ್ ಲೇಡಿ ಆಫ್ ನಝರೆತ್ ಚರ್ಚ್ನ ಪ್ರಧಾನ ಧರ್ಮಗುರು ರೆ| ಫಾ| ಆನ್ಸ್ಲಮ್ ಗೋನ್ಸಾಲ್ವಿಸ್ ಶಾಖೆಯನ್ನು ಅನುಗ್ರಹಿಸಲಿದ್ದು, ಮುಖ್ಯ ಅತಿಥಿüಯಾಗಿ ವಿೂರಾಭಯಂದರ್ ಮುನ್ಸಿಪಾಲ್ ಕಾಪೆರ್Çೀರೇಶನ್ನ ಆಯುಕ್ತ ಡಾ| ನರೇಶ್ ಬಿ.ಗಿತೆ (ಐಎಎಸ್) ಆಗಮಿಸಲಿದ್ದಾರೆ.
ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಬ್ಯಾಂಕ್ನ ಗ್ರಾಹಕರು, ಶೇರುದಾರರು ಮತ್ತು ಹಿತೈಷಿಗಳು ಆಗಮಿಸಿ ಶಾಖೆಯ ಸರ್ವೋನ್ನತಿಗೆ ಶುಭ ಹಾರೈಸುವಂತೆ ಬ್ಯಾಂಕ್ನ ಮಹಾ ಪ್ರಬಂಧಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ವಿಲಿಯಂ ಎಲ್. ಡಿ'ಸೋಜಾ ತಿಳಿಸಿದ್ದಾರೆ.