Friday 19th, April 2024
canara news

ನ.12-13: ಪುಂಜಾಲಕಟ್ಟೆಯಲ್ಲಿ ಕೋಟಿ ಚೆನ್ನಯ ಸ್ವರ್ಣ ಪ್ರಶಸ್ತಿ ಕಬಡ್ಡಿ ಪಂದ್ಯಾಟ

Published On : 05 Oct 2016   |  Reported By : Rons Bantwal


ಅ.05: ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‍ನ ಸಹಭಾಗಿತ್ವದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಇವರ ನಿರಂತರ 33ನೇ ವರ್ಷದ ಸಾರಥ್ಯದಲ್ಲಿ, ಮುಂಬಯಿ ಉದ್ಯಮಿ ಶ್ರೀ ಸುಂದರರಾಜ್ ಹೆಗ್ಡೆ ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಮತ್ತು ಕಾಸರಗೋಡು ಜಿಲ್ಲೆ ಒಳಗೊಂಡÀ ಪುರುಷರ ಹೊನಲು ಬೆಳಕಿನ ಮುಕ್ತ ಹಾಗೂ 60 ಕೆ.ಜಿ ವಿಭಾಗದ ಕೋಟಿ ಚೆನ್ನಯ ಚಿನ್ನದ ಪದಕ ಪ್ರಶಸ್ತಿ ಕಬಡ್ಡಿ ಪಂದ್ಯಾಟವು ಬರುವ 12. ನವೆಂಬರ್.2016ರ ಶನಿವಾರ ಮತ್ತು 13ನೇ ಆದಿತ್ಯವಾರ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ.

ದಾನಿಗಳ ಸಹಕಾರದಿಂದ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ವಂತ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಗೊಳಿಸಿ ಕಳೆದ ವರ್ಷ ಉದ್ಘಾಟನೆಗೈದು ತುಳುನಾಡ ತುಳುಶ್ರೀ ಪ್ರಶಸ್ತಿ ಕಬಡ್ಡಿ ಪಂದ್ಯಾಟವನ್ನು ನಡೆಸಿದ ಸ್ವಸ್ತಿಕ್ ಸಂಸ್ಥೆ ಪುರುಷರ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಹಾಗೂ 60 ಕೆ.ಜಿ.ವಿಭಾಗದ ಕೋಟಿ ಚೆನ್ನಯ ಚಿನ್ನದ ಪದಕ ಕಬಡ್ಡಿ ಪಂದ್ಯಾಟವನ್ನು ನವಂಬರ್ 12 ಶನಿವಾರ ಹಾಗೂ ನವೆಂಬರ್ 13 ರವಿವಾರದಂದು ಪುಂಜಾಲಕಟ್ಟೆಯ ಬಂಗ್ಲೆ ಮೈದಾನದಲ್ಲಿ ಕ್ರೀಡೆಯನ್ನು, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುದೊಂದಿಗೆ ಸಮಾಜದಲ್ಲಿ ಶಾಂತಿ ಸಾಮರಸ್ಯಕ್ಕಾಗಿ ಈ ಕಬಡ್ಡಿ ಪದ್ಯಾಂಟವನ್ನು ಅರ್ಥಪೂರ್ಣವಾಗಿ ಆಯೋಜಿಸುತ್ತಿದೆ.

ಬಹುಮಾನದ ವಿವರ: ಮುಕ್ತ ವಿಭಾಗದಲ್ಲಿ ಪ್ರಥಮ: 50000/- ನಗದು ಕೋಟಿ ಚೆನ್ನಯ ಪ್ರಶಸ್ತಿ-ಚಿನ್ನದ ಪದಕ, ದ್ವಿತೀಯ: 30000/-ನಗದು ಕೋಟಿ ಚೆನ್ನಯ ಟ್ರೋಫಿ, ತೃತೀಯ: 20000/- ನಗದು ಕೋಟಿ ಚೆನ್ನಯ ಟ್ರೋಫಿ ಹಾಗೂ ಚತುರ್ಥ: 10000/-ನಗದು ಕೋಟಿ ಚೆನ್ನಯ ಟ್ರೋಫಿ. 60 ಕೆ.ಜಿ ವಿಭಾಗದಲ್ಲಿ 35000.00/- ನಗದು ಕೋಟಿ ಚೆನ್ನಯ ಪ್ರಶಸಿ-ಚಿನ್ನದ ಪದಕ ನಗದು, ದ್ವಿತೀಯ: 20000/-ನಗದು ಕೋಟಿ ಚೆನ್ನಯ ಟ್ರೋಫಿ, ತೃತೀಯ: 10000/-ನಗದು ಕೋಟಿ ಚೆನ್ನಯ ಟ್ರೋಫಿ, ಚತುರ್ಥ: 10000/-ನಗದು ಕೋಟಿ ಚೆನ್ನಯ ಟ್ರೋಫಿ ಇದಲ್ಲದೆ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಹಾಗೂ ಸವ್ಯಸಾಚಿ ಆಟಗಾರನಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ, ಅಧ್ಯಕ್ಷ ಪ್ರಶಾಂತ್ ಎಂ.ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ ಪಿ ಮಂಜಲಪಲ್ಕೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: ರಾಜೇಶ್ ಪುಲಿಮಜಲು-9901098038, ಅಬ್ದುಲ್ ಹಮೀದ್- 9449330658, ಫ್ರಾನ್ಸಿಸ್ಸ್ ವಿ.ವಿ-9449332283 ಅವರನ್ನು ಸಂಪರ್ಕಿಸುವಂತೆ ಕಾರ್ಯದರ್ಶಿ ಜಯರಾಜ್ ಅತ್ತಾಜೆ ತಿಳಿಸಿದ್ದಾರೆ.

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕøತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿದ್ದು ಸಾಧನೆಯ ಹಾದಿಯಲ್ಲಿ 33ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸಮಾಜಮುಖಿ ಕಾರ್ಯಗಳೊಂದಿಗೆ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. 32 ವರ್ಷಗಳಿಂದ ನಿರಂತರ ಕಬಡ್ಡಿ ಪಂದ್ಯಾಟಗಳನ್ನು ಆಯೋಜಿಸಿ ದೇಶೀ ಕ್ರೀಡೆ ಕಬಡ್ಡಿಯತ್ತ ಯುವಕರನ್ನು ಆಕರ್ಷಿಸಿದೆ. ವಿವಿಧ ಸಾಧಕರನ್ನು ಗುರುತಿಸಿ ಸ್ವಸ್ತಿಕ್ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡುವ ಉತ್ತಮ ಕಾರ್ಯ ಮಾಡುತ್ತಿದೆ. ಸಾಮಾಜಿಕ ಕಾರ್ಯಗಳಿಗಾಗಿ ದ.ಕ.ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಅತ್ಯುತ್ತಮ ಯುವಕ ಸಂಘವೆಂಬ ಪ್ರಶಸ್ತಿ ಗಳಿಸಿದೆ. ಎಂ.ತುಂಗಪ್ಪ ಬಂಗೇರ ಅವರು 1983 ರಲ್ಲಿ ಸಮಾನ ಮನಸ್ಕ ಯುವಕರೊಂದಿಗೆ ಸ್ವಸ್ತಿಕ್ ಕ್ರಿಕೆಟ್ ತಂಡವನ್ನು ಕಟ್ಟಿಕೊಂಡು ಆ ಮೂಲಕ ಕ್ಲಬ್ಬನ್ನು ಸ್ಥಾಪನೆಗೊಳಿಸಿದರು. ನಿರಂತರ 32 ವರ್ಷಗಳಿಂದ ಕಬಡ್ಡಿ ಪಂದ್ಯಾಟ ಆಯೋಜಿಸುತ್ತಿರುವುದು ಕ್ಲಬ್‍ನ ಹೆಗ್ಗಳಿಕೆ ಹಾಗೂ ದಾಖಲೆ.ನೂರಾರು ಜನಪರ ಕಾರ್ಯಕ್ರಮಗಳ ಸಂಘಟನೆಯೊಂದಿಗೆ, ಹಲವಾರು ವಿನೂತನ ಯೋಜನೆಗಳ ಅನುಷ್ಠಾನದೊಂದಿಗೆ, ಸಮಾಜಮುಖಿ ಚಿಂತನೆಗಳೊಂದಿಗೆ ನಿರಂತರ ಜನರೊಂದಿಗಿದ್ದು, ಜನರ ಒಡನಾಡಿಯಾಗಿ, ಸಾಮಾಜಿಕ ಪ್ರಗತಿಯಲ್ಲಿ ವಿಶಿಷ್ಠ ಕೊಡುಗೆ ನೀಡುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಮಾದರಿ ಸಂಘಟನೆಯಾಗಿ ಜನಮೆಚ್ಚುಗೆಗೆ ಪಾತ್ರವಾಗಿದೆ. ನಿರಂತರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ನಡೆಸುವ ಮೂಲಕ ಕ್ರೀಡಾ ಕ್ಷೇತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಸಂಘಟನೆ ಹತ್ತಾರು ಆರೋಗ್ಯ ಶಿಬಿರಗಳು, ಮಾಹಿತಿ ಕಾರ್ಯಾಗಾರಗಳು, ತರಬೇತಿ ಕಮ್ಮಟಗಳು, ಬಡವರಿಗೆ ಮನೆಯ ವ್ಯವಸ್ಥೆ, ಮದುವೆಗೆ ನೆರವು, ಆಥಿರ್üಕ ದುರ್ಬಲರಿಗೆ ಸಹಾಯಧನ, ಅರ್ಹ ಬಡ ಮಕ್ಕಳಿಗೆ ಸಮವಸ್ತ್ರ ವಿತರಣೆ, ಜಿಲ್ಲಾ ಮಟ್ಟದ ಯುವಜನ ಮೇಳ, ಜಿಲ್ಲಾ ಮಟ್ಟದ ಆರೋಗ್ಯ ಮೇಳ, ಜಿಲ್ಲಾ ಮಟ್ಟದ ನಾಟಕೋತ್ಸವ, ಜಿಲ್ಲಾ ಕ್ರೀಡೋತ್ಸವ ಮೊದಲಾದ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಕ್ರಿಯಾಶೀಲವಾಗಿ, ರಚನಾತ್ಮಕವಾಗಿ ಮುನ್ನಡೆಯುತ್ತಿದೆ. ಎಂಟು ವರ್ಷಗಳ ಹಿಂದೆ ರಜತ ಮಹೋತ್ಸವ ವನ್ನು ಸ್ವಸ್ತಿ ಸಿರಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಸಾಮೂಹಿಕ ವಿವಾಹದೊಂದಿಗೆ ಅದ್ದೂರಿಯಾಗಿ ಆಚರಿಸಿ ನಾಡಿನ ಗಮನ ಸೆಳೆದ ಈ ಕ್ಲಬ್ ಅದನ್ನು ನಿರಂತರವಾಗಿ ವೈಭವಯುತವಾಗಿ ಮುಂದುವರಿಸುತ್ತಾ ನಾಡಿನ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ ಎಂದು ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ತಿಳಿಸಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here