ಮಂಗಳೂರು: ರಾಜ್ಯಾದ್ಯಂತ ನೂರಾರು ಮಂದಿ ಮೀನಿನ ತಲೆ ತಿಂದು ಅಸ್ವಸ್ಥರಾಗಿದ್ದು, ಇನ್ನು ಮುಂದೆ ವಿಷಕಾರಿ ಮೀನುಗಳ ತಲೆ, ತ್ಯಾಜ್ಯವನ್ನು ಹೊರಗಡೆ ನೀಡದಂತೆ ಕಂಪೆನಿಗಳಿಗೆ ಆಹಾರ ಸಚಿವ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ. ದ.ಕ.ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಚೇಂಬೇರಿ ಮೀನಿನ ತಲೆ ಭಾಗ ತಿಂದು ಕೆಲವು ಮಂದಿ ಅಸ್ವಸ್ಥಗೊಂಡಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಸಚಿವ ಖಾದರ್ ಅವರು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಕಂಪೆನಿಗೆ ಖಡಕ್ ಸೂಚನೆ ನೀಡಿದ್ದಾರೆ. ಮಾತ್ರವಲ್ಲದೆ, ಅಸ್ವಸ್ಥರ ಆಸ್ಪತ್ರೆ ಖರ್ಚು ಪಾವತಿಸಲು ಫಿಶ್ ಮಿಲ್ ಕಂಪೆನಿಗಳಿಗೆ ಸೂಚನೆ ನೀಡಿದ್ದಾರೆ.ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಮರುಕಳಿಸಿದರೆ ಕಂಪೆನಿಯನ್ನೆ ಮುಚ್ಚಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.