ಡಿಸೆಂಬರ್ 9ರಿಂದ 13 ರವರೆಗೆ ಬದಿಯಡ್ಕದಲ್ಲಿ ಜರಗಲಿರುವ ವಿಶ್ವ ತುಳುವೆರೆ ಆಯನೊದ ಪೂರ್ವಭಾವಿಯಾಗಿ ನಡೆಯುವ ತುಳುನಾಡು ತಿರ್ಗಾಟ ರಥಯಾತ್ರೆಗೆ ಗುರುವಾಯನಕೆರೆ ಸಮೀಪದ ಮದ್ದಡ್ಕದ ನೂರುಲ್ ಹುದಾ ಮಸೀದಿ ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು.
ತುಳುನಾಡಿನ ಉನ್ನತಿಗೆ ಈ ಭೂ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಚಿಂತಿಸಬೇಕಾದ ಅಗತ್ಯ ಬಂದೊದಗಿದ್ದು ಈ ಹಿನ್ನಲೆಯಲ್ಲಿ ನಡೆಯುವ ವಿಶ್ವ ತುಳುವೆರೆ ಆಯನೊ ಯಶಸ್ವಿಯಾಗಲೆಂದು ಮಸೀದಿ ಪದಾಧಿಕಾರಿಗಳಾದ ತಾಜುದ್ದೀನ್ ಶುಭ ಹಾರೈಸಿದರು. ಅಬ್ದುಲ್ ಸಲೀಂ,ಎಂ ಹುಸೇನ್ ,ಮಾಮು ಮದ್ದಡ್ಕ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಥಯಾತ್ರೆ ಹಾಗೂ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮದ ಬಗ್ಗೆ ಶಂಕರ ಸ್ವಾಮಿ ಕೃಪಾ ವಿಷಯ ಪ್ರಸ್ತಾವನೆಗೈದರು.