ಕುಂದಾಪುರ: ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ವಿವಿದೋದ್ಧೇಶ ಸಹಕಾರಿ ಸಂಘ (ರಿ.) ಕುಂದಾಪುರ ಇದರ ಆಮ್ಆದ್ಮಿ ಯೋಜನೆಯಡಿ ಸಂಘದ ಮೀನುಗಾರ ಸದಸ್ಯರ 74 ಪ್ರತಿಭಾವಂತ ಮಕ್ಕಳಿಗೆ ಸಂಘದ ಅಧ್ಯಕ್ಷರಾದ ಶ್ರೀ ಆರ್. ಮಂಜುನಾಥ್ ಬಾಳಿಕೆರೆ ಇವರು ಒಟ್ಟು ರೂ. 40,800 ವಿದ್ಯಾರ್ಥಿ ವೇತನವನ್ನು ಸಂಘದ ಮುಖ್ಯ ಕಛೇರಿಯಲ್ಲಿ ವಿತರಿಸಿದರು.
ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಅಸ್ಲಾಂ ಸಾಹೇಬ್, ನಿರ್ದೇಶಕರುಗಳಾದ ಶ್ರೀ ಎಮ್.ಆರೀಫ್, ಶ್ರೀ ಬಾಬು ಮೊಗವೀರ, ಶ್ರೀ ಮಂಜು ಪೂಜಾರಿ, ಶ್ರೀ ಶಿವಾನಂದ, ಶ್ರೀ ಎಮ್.ಹುಸೇನ್ ಸಾಹೇಬ್, ಶ್ರೀ ರತ್ನಾ ಕೊಟೇಶ್ವರ, ಶ್ರೀಮತಿ ಸುಶೀಲಾ ಗುಡ್ಡೆಯಂಗಡಿ, ಶ್ರೀಮತಿ ಶಾರದಾ ಖಾರ್ವಿ, ಶ್ರೀಮತಿ ಸಾಧು ಕುಂದಾಪುರ, ಸಿಬ್ಬಂದಿಗಳಾದ ನಾಗೇಂದ್ರ, ಪ್ರತಿಭಾ, ಕೆ.ಮಾಲತಿ, ಜ್ಯೋತಿ, ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಸತೀಶ್ ಮರವಂತೆ ಕಾರ್ಯಕ್ರಮವನ್ನು ನಿರೂಪಿಸಿದರು.