Thursday 25th, April 2024
canara news

ಚಿಲ್ಲರೆ ಮೀನುಗಾರ ಸೊಸಾೈಟಿಯಿಂದ ವಿದ್ಯಾರ್ಥಿವೇತನ ವಿತರಣೆ

Published On : 09 Oct 2016   |  Reported By : Bernard J Costa


ಕುಂದಾಪುರ: ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ವಿವಿದೋದ್ಧೇಶ ಸಹಕಾರಿ ಸಂಘ (ರಿ.) ಕುಂದಾಪುರ ಇದರ ಆಮ್‍ಆದ್ಮಿ ಯೋಜನೆಯಡಿ ಸಂಘದ ಮೀನುಗಾರ ಸದಸ್ಯರ 74 ಪ್ರತಿಭಾವಂತ ಮಕ್ಕಳಿಗೆ ಸಂಘದ ಅಧ್ಯಕ್ಷರಾದ ಶ್ರೀ ಆರ್. ಮಂಜುನಾಥ್ ಬಾಳಿಕೆರೆ ಇವರು ಒಟ್ಟು ರೂ. 40,800 ವಿದ್ಯಾರ್ಥಿ ವೇತನವನ್ನು ಸಂಘದ ಮುಖ್ಯ ಕಛೇರಿಯಲ್ಲಿ ವಿತರಿಸಿದರು.

ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಅಸ್ಲಾಂ ಸಾಹೇಬ್, ನಿರ್ದೇಶಕರುಗಳಾದ ಶ್ರೀ ಎಮ್.ಆರೀಫ್, ಶ್ರೀ ಬಾಬು ಮೊಗವೀರ, ಶ್ರೀ ಮಂಜು ಪೂಜಾರಿ, ಶ್ರೀ ಶಿವಾನಂದ, ಶ್ರೀ ಎಮ್.ಹುಸೇನ್ ಸಾಹೇಬ್, ಶ್ರೀ ರತ್ನಾ ಕೊಟೇಶ್ವರ, ಶ್ರೀಮತಿ ಸುಶೀಲಾ ಗುಡ್ಡೆಯಂಗಡಿ, ಶ್ರೀಮತಿ ಶಾರದಾ ಖಾರ್ವಿ, ಶ್ರೀಮತಿ ಸಾಧು ಕುಂದಾಪುರ, ಸಿಬ್ಬಂದಿಗಳಾದ ನಾಗೇಂದ್ರ, ಪ್ರತಿಭಾ, ಕೆ.ಮಾಲತಿ, ಜ್ಯೋತಿ, ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಸತೀಶ್ ಮರವಂತೆ ಕಾರ್ಯಕ್ರಮವನ್ನು ನಿರೂಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here