ಮುಂಬಯಿ, ಅ.09: ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಪೇಜಾವರ ಮಠದ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಸಂಸ್ಥೆಯು ಇಂದಿಲ್ಲಿ ಶನಿವಾರ ಸಾಂತಕ್ರೂಜ್ ಪೂರ್ವದಲ್ಲಿನ ಪೇಜಾವರ ಮಠದ ಮುಂಬಯಿ ಶಾಖೆಯಲ್ಲಿ ಶರನ್ನವರಾತ್ರಿ ಕಾಲದ ಮೂಲ ನಕ್ಷತ್ರಾಯುಕ್ತ ದಿವಸ ದುರ್ಗಾರಾಧನೆ (ದುರ್ಗಾಪೂಜೆ) ನೆರವೇರಿಸಿತು.
ಸಂಜೆ ಶ್ರೀ ಪೇಜಾವರ ಮಠ ಮುಂಬಯಿ ಶಾಖಾಡಳಿತಾಧಿಕಾರಿ ಪುರೋಹಿತ ರಾಮದಾಸ ಉಪಾಧ್ಯಾಯ ರೆಂಜಾಳ ದುರ್ಗಾರಾಧನೆ ಹಾಗೂ ಮಹಾಪೂಜೆ ನೆರವೇರಿಸಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್ಕೆಬಿ ಅಸೋಸಿಯೇಶನ್ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಅಧ್ಯಕ್ಷ ಡಾ| ಎ.ಎಸ್ ರಾವ್ ಮತ್ತು ಆಶಾ ಎ.ರಾವ್ ದಂಪತಿ, ಗೌ| ಕಾರ್ಯದರ್ಶಿ ಬಿ.ಆರ್ ಗುರುಮೂರ್ತಿ, ಗೌ| ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ವಿಶ್ವಸ್ಥ ಸದಸ್ಯರುಗಳಾದ ಟಿ.ಬಿ ಹುನ್ನೂರು, ಕೃಷ್ಣ ಯಾದವಾಚಾರ್ಯ, ಭಾರ್ಗವ ಆಚಾರ್ಯ, ಇತರ ಪದಾಧಿಕಾರಿಗಳು ಮತ್ತು ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಆಡಳಿತಾಧಿಕಾರಿಗಳಾದ ನಿರಂಜನ್ ಗೋಗಟೆ, ಶ್ರೀಹರಿ ಭಟ್ ಸೇರಿದಂತೆ ಭಕ್ತರು ಆಗಮಿಸಿ ಶ್ರಿದುರ್ಗಾಮಾತೆಗೆ ಪೂಜೆಗೈದರು. ಆಡಳಿತಾಧಿಕಾರಿ ಪ್ರಕಾಶ್ ಆಚಾರ್ಯ ರಾಮಕುಂಜ ಮತ್ತು ಪುರೋಹಿತರು ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿ ಸಮಸ್ತ ಭಕ್ತಾಭಿಮಾನಿಗಳಿಗೆ ಪ್ರಸಾದವನ್ನಿತ್ತು ಆಶೀರ್ವಚಿಸಿದರು.