ಮುಂಬಯಿ, ಅ.11: ರಾಮರಾಜ ಕ್ಷತ್ರೀಯ ಮಹಿಳಾ ಮಂಡಳಿ ಮುಂಬಯಿ ಸಂಸ್ಥೆಯು ಇಂದಿಲ್ಲಿ ಶನಿವಾರ ಸಂಜೆ ವಾರ್ಷಿಕ ಶಾರದ ಪೂಜೆ, ಹಳದಿ ಕುಂಕುಮ, ದಾಂಡಿಯಾ ರಾಸ್ ಹಾಗೂ ಮಾತಾ ಕೀ ಚೌಕಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಾರದೋತ್ಸವ ಆಚರಿಸಿತು.
ಸಾಕಿನಾಕ ಇಲ್ಲಿನ ಕಾವೇರಿ ಕಾಂಪ್ಲೆಕ್ಸ್ನÀಲ್ಲಿ ರಾಮರಾಜ ಕ್ಷತ್ರೀಯ ಸಂಘದ ಅಧ್ಯಕ್ಷ ಬಿ.ಗಣಪತಿ ಶೇರೆಗಾರ್ ಮತ್ತು ಮಹಿಳಾಧ್ಯಕ್ಷೆ ಸುಬ ವಿ.ರಾವ್ ಸಾರಥ್ಯದಲ್ಲಿ ನೇರವೇರಿದ್ದು, ಕಾರ್ಯಕ್ರಮದಲ್ಲಿ ಹೇಮಾ ಎಂ.ಗುಡ್ಡೆಮನೆ ಮುಖ್ಯ ಅತಿಥಿüಯಾಗಿ ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ತರುಣ್ ಅಡ್ವಾನಿ ಬಳಗ ಮುಂಬಯಿ ಸಮೂಹವು ಮಾತಾ ಕೀ ಚೌಕಿ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿತು.
ಸಂಘದ ಗೌ| ಪ್ರ| ಕಾರ್ಯದರ್ಶಿ ದಯಾನಂದ ಶೇರೆಗಾರ್, ಸಂಘದ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪೂರ್ಣಾನಂದ ಶೇರೆಗಾರ್, ಕಾರ್ಯದರ್ಶಿ ಬಟ್ವಾಡಿ ರತ್ನಾಕರ್ ಮತ್ತಿತರ ಗಣ್ಯರು ಸೇರಿದಂತೆ ನೂರಾರು ಸದಸ್ಯರು, ಮಹಿಳಾ ಸದಸ್ಯೆಯರು ಉಪಸ್ಥಿತರಿದ್ದು ಮಹಿಳಾ ಗೌ| ಕಾರ್ಯದರ್ಶಿ ಅಂಜು ಸಿ.ಕೋಟೆಕಾರ್ ಸ್ವಾಗತಿಸಿದರು. ಶಲಿಟಾ ಕೋಮಲ್ ವಂದಿಸಿದರು.