ವಿಶ್ವ ತುಳುವೆರೆ ಆಯನೊದ ಅಂಗವಾಗಿ ಕಾಸರಗೋಡಿನಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗುವ ಬಹುಭಾಷಾ ಸಂಗಮ ಕಾರ್ಯಕ್ರಮ ತುಳುವರ ಹೃದಯ ವೈಶಾಲ್ಯತೆಗೆ ಮಾದರಿಯಾಗಿದ್ದು ತನ್ನ ಭಾಷೆ ಸಂಸ್ಕøತಿಯನ್ನು ಉಳಿಸುವುದಲ್ಲದೆ ಇತರ ಭಾಷೆಗಳಿಗೂ ಮನ್ನಣೆಯ ಮಣೆ ಕಲ್ಪಿಸಿದ ತುಳುವೆರೆ ಆಯನೊ ಯಶಸ್ವಿಯಾಗಲಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.
ಅವರು ಬಂಟ್ವಾಳ ಅತಿಥಿಗೃಹದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ವಿಶ್ವತುಳುವೆರೆ ಆಯನೊದ ಪದಾಧಿಕಾರಿಗಳಿಗೆ ಶುಭ ಹಾರೈಸಿದ್ದಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿಯೂ ಭರವಸೆ ನೀಡಿದರು. ಕಾರ್ಯಕ್ರಮಕ್ಕೆ ಕರ್ನಾಟಕ ಸರಕಾರದ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ತುಳುವೆರೆ ಆಯನೊದ ಗೌರವಾಧ್ಯಕ್ಷರಾದ ಸಚಿವ ಬಿ.ರಾಮನಾಥ ರೈ,ಮಹಿಳಾ ಸಮಿತಿ ಅಧ್ಯಕ್ಷರಾದ ಶಾಸಕಿ ಶಕುಂತಳಾ ಶೆಟ್ಟಿ ಪುತ್ತೂರು, ಶಾಸಕ ಮೊಯ್ದಿನ್ ಬಾವ,ವಿಶ್ವ ತುಳುವೆರೆ ಆಯನೊದ ಪ್ರಧಾನ ಕಾರ್ಯದರ್ಶಿ ಡಾ.ರಾಜೇಶ್ ಆಳ್ವ ಬದಿಯಡ್ಕ,ಮಂಗಳೂರು ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ,ದೈವರಾಧಕ ಸಂಚಾಲಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು,ತುಳುನಾಡ ತಿರ್ಗಾಟ ಸಂಚಾಲಕ ಹರ್ಷ ರೈ ಪುತ್ರಕಳ,ಸೇಸು ಏತಡ್ಕ,ನಿಶಾಂತ್ ಪಾಟಾಳಿ ನೀರ್ಚಾಲು,ಭಾಸ್ಕರ ಪೂಜಾರಿ ಕುಂಬಳೆ ಮೊದಲಾದವರು ಈ ಸಂದರ್ಭದಲ್ಲಿ ಭೇಟಿ ಮಾಡಿದರು.