ಮಂಗಳೂರು: ಸ್ಮಾರ್ಟ್ ಸಿಟಿಗೆ ಬಂದರು ಮತ್ತು ಮೀನುಗಾರಿಕೆಯ ಸಮಗ್ರ ಅಭಿಧಿವೃದ್ಧಿ ಮುಖ್ಯ ಧ್ಯೇಯವಾಗಿದ್ದು, ಪೂರಕ ಕಾರ್ಯಯೋಜನೆಗಳನ್ನು ರೂಪಿಸಧಿಲಾಗುತ್ತಿದೆ ಎಂದು ಶಾಸಕ ಜೆ.ಆರ್. ಲೋಬೊ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಹಳೆ ಮೀನುಗಾರಿಕಾ ಬಂದರಿನ ಅಭಿಧಿವೃದ್ಧಿ ಅಗತ್ಯವಾಗಿದ್ದು, 3ನೇ ಹಂತದ ಕಾಮಗಾರಿಯನ್ನು 65 ಕೋಟಿ ರೂ.ಗಳಿಂದ 90 ಕೋಟಿ ರೂ.ಗಳಿಗೆ ಪರಿಷ್ಕರಿಸಲಾಗಿದೆ.
ಈಗಾಗಲೇ ಬಿಡುಗಡೆಯಾದ 54 ಕೋಟಿ ರೂ.ವಿನಿಯೋಗಿಸಲಾಗಿದ್ದು, ಉಳಿದ ಹಣವನ್ನು ಬಿಡುಗಡೆ ಮಾಡಲು ಸರಕಾರವನ್ನು ಕೋರಲಾಗಿದೆ. ರಾಜ್ಯ ಮತ್ತು ಕೇಂದ್ರದ ಸರಕಾರದ ಅನುಪಾತ 40:60 ಆಗಿದ್ದು, ಕೇಂದ್ರದಿಂದ 34 ಕೋಟಿ ರೂ. ಬಿಡುಗಡೆಯಾಗಲು ಬಾಕಿಯಾಗಿರುವುದರಿಂದ ಕಾಮಗಾರಿ ಕುಂಟುತ್ತಿದೆ. ಮೀನುಗಾರಿಕೆ ಬಂದರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ 2.5 ಕೋಟಿ ರೂ. ಅಗತ್ಯಧಿವಿದ್ದು, ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದರು.