ಮಂಗಳೂರು: ದೇಶದಲ್ಲಿ ಏಕರೂಪ ಕಾನೂನು ಜಾರಿ ಮಾಡಲು ಪ್ರಧಾನಿ ಮೋದಿ ಪ್ರಯತ್ನ ಶ್ಲಾಘನೀಯ ಇದನ್ನು ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ೨೦೦೯ರ ಪಬ್ ದಾಳಿ ಆರೋಪಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಂಗಳೂರು ಪಬ್ ದಾಳಿ ಸಂಬಂಧವಾಗಿ ವಿಚಾರಣೆಗೆ ಆಗಮಿಸಿದ ವೇಳೆ ಮಂಗಳೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚಲೋ ಉಡುಪಿ ಕಾರ್ಯಕ್ರಮದಲ್ಲಿ ಮಠಕ್ಕೆ ಮುತ್ತಿಗೆ ಹಾಕುವ ವಿಚಾರ ಮಾತನಾಡಿದ್ದಾರೆ. ಮುಸ್ಲಿಂಮರ ಮಸೀದಿಗಳಲ್ಲೂ ಅಸ್ಪೃಶ್ಯತೆ ಜೀವಂತವಿದೆ. ತಾಕತ್ತಿದ್ದರೆ ಮುಸ್ಲಿಂರ ಮಸೀದಿಗೂ ಮುತ್ತಿಗೆ ಹಾಕಲಿ ಎಂದು ಸವಾಲು ಹಾಕಿದರು.