ಮಂಗಳೂರು: ಎತ್ತಿನಹೊಳೆ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರದ ಮೂಲಕ ಹಣದ ಹೊಳೆಯೇ ಹರಿಯುತ್ತಿರುವ ವಿಷಯವನ್ನು ಮಾಧ್ಯಮಗಳು ಬಹಿರಂಗಪಡಿಸುತ್ತಿವೆ. ಯೋಜನೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಭಾಗಿಯಾಗಿದ್ದು, ತತ್ಕ್ಷಣ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಆಗ್ರಹಿಸಿದ್ದಾರೆ.
ಈ ಯೋಜನೆಯಿಂದ ದಕ್ಷಿಣ ಕನ್ನಡಕ್ಕೆ ಅನ್ಯಾಯವಾಗುತ್ತದೆ. ಹಾಗೆಯೇ ಕೋಲಾರದವರಿಗೂ ನೀರು ಲಭಿಸುವುದಿಲ್ಲ ಎಂಬುದನ್ನು ನಾವು ನಿರಂತರ ಹೇಳುತ್ತಾ ಬಂದಿದ್ದೇವೆ. ತಜ್ಞರೂ ಇದೇ ರೀತಿಯ ಅಭಿಪ್ರಾಯ ಮಂಡಿಸಿದ್ದಾರೆ. ಯೋಜನೆ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಹೋರಾಟಗಾರರೊಂದಿಗೆ ತಜ್ಞರ ಸಂವಾದ ನಡೆಸಲಿದ್ದಾರೆ ಎಂದು ಹೇಳುತ್ತಾ ಬಂದಿರುವ ಸರಕಾರ ಈವರೆಗೆ ಅದನ್ನು ಮಾಡಿಲ್ಲ ಎಂದರು.ನಾನು ಎತ್ತಿನಹೊಳೆ ಯೋಜನೆ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದರೂ ರಾಜ್ಯ ಸರಕಾರ ಇದರ ಬಗ್ಗೆ ಯಾವುದೇ ಗಮನ ಹರಿಸಿಲ್ಲ.
ಭ್ರಷ್ಟಾಚಾರಕ್ಕಾಗಿಯೇ ಈ ಯೋಜನೆಯನ್ನು ರಾಜ್ಯ ಸರಕಾರ ಪೋಷಿಸುತ್ತಿದ್ದು, ಕೋಲಾರ ಭಾಗದ ಜನರಿಗೂ ಯೋಜನೆಯಿಂದ ನೀರು ಲಭಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಇದರ ವಿರುದ್ಧ ಇಡೀ ಕರ್ನಾಟಕ ಜನತೆ ಹೋರಾಟಕ್ಕೆ ಮುಂದಾಗಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ