ಮುಂಬಯಿ (ಬಹರೇನ್), ಅ.24: ಗುರುಸೇವ ಸಮಿತಿ ಬಹರೇನ್ಬಿಲ್ಲವಾಸ್ ಆಶ್ರಯದಲಿ ್ಲತಮ್ಮಸದಸ್ಯರಿಗೆ "ಕೋಟಿಚೆನ್ನಯಕ್ರೀಡಾಕೂಟ-2016"ನ್ನು ಇತ್ತೀಚೆಗೆ ಗಲ್ಫ್ ಏರ್ಕಬ್ಕ್ರಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಸುಮಾರು 200 ಸದಸ್ಯರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವ್ಯವಸ್ಥಿತವಾಗಿ ನಡೆಸಲಾಗಿದ್ದ ಪಥಸಂಚಲನ, ಕ್ರೀಡಾಜ್ಯೋತಿ ಬೆಳಗಿಸುದರೊಂದಿಗೆ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಲಾಯಿತು. ಬೇರೆಬೇರೆ ವಿಭಾಗಗಳಲ್ಲಿ ನಡೆದ ಈ ಕ್ರೀಡೆಯಲ್ಲಿ ಮಕ್ಕಳು ಹಾಗೂ ಹಿರಿಯರು ವ್ಯಯಕ್ತಿಕ ಹಾಗೂ ತಂಡದ ರೂಪದಲ್ಲಿ ಸ್ಪರ್ಧಿಸಿದ್ದಿದರು. ಕ್ರೀಡಾಕಾರ್ಯದರ್ಶಿ ಸಂದೀಪ್ ಪೂಜಾರಿ ಕ್ರೀಡೆಯನ್ನು ಸಂಘಟಿಸಿದ್ದರು. ವಿಜೇತರಾದ ಸ್ಪರ್ಧಾಳುಗಳಿಗೆ ಬಹರೇನ್ ಬಿಲ್ಲವಾಸ್ ಅಧ್ಯಕ್ಷ ರಾಜಕುಮಾರ್ ಪ್ರಶಸ್ತಿ ಹಾಗೂ ಪ್ರಮಾಣಪತ್ರದೊಂದಿಗೆ ಸನ್ಮಾನಿಸಿ ಗೌರವಿಸಿದರು.