ಮುಂಬೈಯ ಪ್ರಸಿದ್ಧ ಅಂಕಣಕಾರ ಹೆಸರಾಂತ ಸಾಹಿತಿ, ಕಾದಂಬರಿಕಾರ, ಅಂಕಣಕಾರ, ವಿಜ್ಞಾನಿ, ಮುಂಬೈಯ ಗೋಕುಲವಾಣಿಯ ಗೌರವ ಸಂಪಾದಕರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕøತರು ಡಾ. ವ್ಯಾಸರಾವ್ ನಿಂಜೂರು ಅವರನ್ನು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಗೌರವಿಸಿದರು.
ಡಾ. ಎಂ. ಪ್ರಭಾಕರ ಜೋಶಿ, ಪೊಳಲಿ ನಿತ್ಯಾನಂದ ಕಾರಂತ, ನವನೀತ ಶೆಟ್ಟಿ ಕದ್ರಿ, ಜಿಲ್ಲಾ ಪರಿಷತ್ನ ಕೋಶಾಧಿಕಾರಿ ಪೂರ್ಣಿಮಾ ರಾವ್ ಪೇಜಾವರ, ಮೊದಲಾದವರು ಉಪಸ್ಥಿತರಿದ್ದರು. ಡಾ. ವ್ಯಾಸ ರಾವ್ ನಿಂಜೂರುರವರ ಇತ್ತೀಚಿಗಷ್ಟೆ ಬಿಡುಗಡೆಯಾದ ತೆಂಕನಿಡಿಯೂರಿನ ಕುಳುವಾರಿಗಳು ಕಾದಂಬರಿ ಅತ್ಯುತ್ತಮವಾಗಿ ಸರ್ವರಿಂದ ಸ್ವೀಕರಿಸಲ್ಪಟ್ಟದ್ದನ್ನು ಸ್ಮರಿಸಿಕೊಳ್ಳಬಹುದು.