ಮಂಗಳೂರು: ಜಿಲ್ಲಾ ವ್ಯಾಪ್ತಿಯಲ್ಲಿ ನೀರಿನ ಮೂಲದ 500 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಕೊಳವೆ ಬಾವಿ ಕೊರೆಯವುದನ್ನು ನಿಷೇಧಿಸಲಾಗಿರುವ ಆದೇಶವನ್ನೇ ಪಾಲಿಸಲು ಬುಧವಾರ ದ.ಕ.ಜಿ.ಪಂ.ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಗ್ರಾಮಾಂತರ ಪ್ರದೇಶದಲ್ಲಿ ಆರ್ಥಿಕವಾಗಿ ಶಕ್ತಿವಂತರು ಬೋರ್ವೆಲ್ಗಳನ್ನು ಕೊರೆಯಿಸುತ್ತಿದ್ದಾರೆ. ಆದರೆ, ಬಡವರಿಗೆ ಮಾತ್ರ ಕಾನೂನು ಅಡೆತಡೆಗಳಿಂದ ಸಮಸ್ಯೆಗಳು ಎದುರಾಗುತ್ತವೆ. ತುರ್ತು ಕುಡಿಯುವ ನೀರಿಗಾಗಿ ಕೊಳವೆ ಬಾವಿ ತೆಗೆಯುವ ಅವಕಾಶ ನಿಯಮದಲ್ಲಿದ್ದರೆ ಮಾಹಿತಿ ನೀಡಬೇಕು ಎಂದು ಸದಸ್ಯ ಎಸ್.ಎನ್. ಮನ್ಮಥ ಅವರು ಆಗ್ರಹಿಸಿದ ವೇಳೆ ಪ್ರತಿಕ್ರಿಯಿಸಿದ ಜಿ. ಪಂ. ಉಪ ಕಾರ್ಯದರ್ಶಿ ಉಮೇಶ್ ಅವರು, ನೀರಿನ ಮೂಲದಿಂದ 500 ಮೀ. ವ್ಯಾಪ್ತಿಯಲ್ಲಿ ಬೋರ್ವೆಲ್ ಕೊರೆಯಬಾರದೆಂಬ ಆದೇಶವಿದೆ.
ಮುಂಗಾರುಮಳೆ ಕೊರತೆಯಾಗಿರುವುದರಿಂದ ಅಣೆಕಟ್ಟುಗಳು ತುಂಬಿಲ್ಲ. ಅಂತರ್ಜಲ ಮಟ್ಟ ಕುಸಿದಿದ್ದು, ರಾಜ್ಯದಲ್ಲಿ ಬರ ಪರಿಸ್ಥಿತಿಯಿದೆ. ಸರಕಾರವೂ ಬೋರ್ವೆಲ್ ಕೊರೆಯುವುದನ್ನು ನಿಷೇಧಿಸಿದೆ. ಯಾವುದೇ ಸ್ಥಳದಲ್ಲೂ ಕಾನೂನು ಬಾಹಿರವಾಗಿ ಬೋರ್ವೆಲ್ ಕೊರೆಯದಂತೆ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಯವರಿಗೆ ನೀಡಲಾಗಿದೆ ಎಂದರು.