ಮಂಗಳೂರು: ಕದ್ರಿ ಕ್ರಿಕೆಟರ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನಿವೃತ್ತ ಯೋಧರು ಹಾಗೂ ಸಾಧಕ ಕಲಾವಿದರಿಗೆ ಸನ್ಮಾನನ ಕಾರ್ಯಕ್ರಮ ಅ. 30ರಂದು ಸಂಜೆ 6.30ಕ್ಕೆ ಕದ್ರಿ ಮೈದಾನದಲ್ಲಿ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಿವೃತ್ತ ಯೋಧರಾದ ಪಿ.ಪಿ. ಜೋಶಿ, ದಿನೇಶ್, ಗೋಪಿನಾಥ್, ಕೊರಗ, ರಮಾನಾಥ ಪ್ರಭು, ಚಿತ್ರನಟಿ ಹಾಗೂ ಟಿವಿ ಕಾರ್ಯಕ್ರಮ ನಿರೂಪಕಿ ಅನುಶ್ರೀ, ಪ್ರಶಸ್ತಿ ವಿಜೇತ ಗಾಯಕರಾದ ಸಂತೋಷ್ ವೆಂಕಿ, ಸುಪ್ರಿಯಾ ಲೋಹಿತ್, ನಕುಲ್ ಅಭಯಂಕರ್, ಸರಿಗಮಪ ಖ್ಯಾತಿಯ ಶ್ರೀರಾಮ್ ಕಾಸರ್, ಡ್ರಾಮಾ ಜ್ಯೂನಿಯರ್ ವಿನ್ನರ್ ಚಿತ್ರಾಲಿ, ಹೊಸದಿಲ್ಲಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದ್ದ ಸವಿತಾ ಕದ್ರಿ, ಚೋಟಾ ರಿಪೋರ್ಟರ್ ಶ್ರೇಯಾದಾಸ್, ಕಲಾವಿದರಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಅವರಿಗೆ ಸನ್ಮಾನ ನಡೆಯಲಿದೆ.