ಕುಂದಾಪುರ, ನ.14: ಕುಂದಾಪುರದ ಗಾಂಧಿ ಮೈದಾನದಲ್ಲಿ ನಾಳೆ, ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಆರಂಭವಾಗುವ ಕ್ರೀಡಾ ಕೂಟದ ಪೂರ್ವಭಾವಿ ಸಿದ್ದತೆಯನ್ನು ಭಾನುವಾರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಬಿ ನಾಯಕ್ ಭೇಟಿ ನೀಡಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ಪುರಸಭೆಯ ಉಪಾಧ್ಯಕ್ಷ ರಾಜೇಶ್ ಕಾವೇರಿ, ಜಿಲ್ಲಾ ಕ್ರೀಡಾ ಸಂಯೋಜಕ ಎಸ್. ಶ್ರೀಧರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಫಾ.ಪ್ರವೀಣ ಅಮೃತ್ ಮಾರ್ಟಿಸ್, ದೈಹಿಕ ಶಿಕ್ಷಣ ಉಪನ್ಯಾಸಕರಾದ ಸತ್ಯನಾರಾಯಣ ನಾಯಕ್, ನಾಗರಾಜ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ ಬೀಜಾಡಿ, ಶಾಂತಿ ರಾಣಿ ಬೆರೆಟ್ಟೊ, ರತ್ನಾಕರ ಶೆಟ್ಟಿ, ಉಪನ್ಯಾಸಕ ವಸಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನಾಳೆ ನೆಡೆಯುವ ಕ್ರೀಡಾ ಕೂಟದ ಕಾರ್ಯಕ್ರಮಗಳು
ನ.15ರ ಮಂಗಳವಾರ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯ ಸಂಚಾಲಕ ಅ.ವಂ.ಫಾ. ಅನಿಲ್ ಡಿ.ಸೋಜಾ ಕ್ರೀಡಾ ಕೂಟದ ಪುರಮೆರವಣಿಗೆ ಉದ್ಘಾಟಿಸಲಿದ್ದಾರೆ. ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಹಿಸಲಿದ್ದಾರೆ. ಸಚಿವ ಪ್ರಮೋದ್ ಮಧ್ವರಾಜ್ ಕ್ರೀಡಾಕೂಟ ಉದ್ಘಾಟಿಸಲಿದ್ದು, ಕರ್ನಾಟಕ ಸರಕಾರದ ಮುಖ್ಯ ಸಚೇತಕ ಐವನ್ ಡಿ.ಸೋಜಾ ಧ್ವಜಾರೋಹಣಗೈಯಲಿದ್ದಾರೆ. ಏಕಲವ್ಯ ಪ್ರಶಸ್ತಿ ಪುರಸ್ಕøತ ಅನೂಪ್ ಡಿ ಕೊಸ್ಟಾ ಕ್ರೀಡಾ ಜ್ಯೋತಿ ಬೆಳಗಿಸಲಿದ್ದು, ವಿಧಾನ ಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ ವಂದನೆ ಸ್ವೀಕರಿಸಲಿದ್ದಾರೆ.
ನ.16 ರಂದು ಬುಧವಾರ 3.10ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಸಭೆಯ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಗೋಪಾಲ ಪೂಜಾರಿ ವಹಿಸಲಿದ್ದಾರೆ. ಸಚಿವ ಪ್ರಮೋದ್ ಮಧ್ವರಾಜ್ ಬಹುಮಾನ ವಿತರಣೆಯನ್ನು, ಸಂಸದೆ ಶೋಭಾ ಕರಂದ್ಲಾಜೆ ಸಮಗ್ರ ಪ್ರಶಸ್ತಿ ವಿತರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನಡೆಯುವ ಸ್ಪರ್ಧೆಗಳು
ಈ ಕ್ರೀಡಾಕೂಟದಲ್ಲಿ ಬಾಲಕ ಬಾಲಕೀಯರಿಗೆ ಈ ಕೆಳಗಿನ ಸ್ಪರ್ಧೆ ನಡೆಯಲಿದೆ. 100ಮೀ,200ಮೀ, 400ಮೀ, 800ಮೀ, 1500ಮೀ,3000ಮೀ, 5000ಮೀ, ದೂರ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಪೋಲ್ವಾಲ್ಟ್, 110ಮೀ.ಹಡಲ್ಸ್, ಶಾಟ್ಪುಟ್, ಡಿಸ್ಕಸ್, ಜಾವಲಿನ್, ಹ್ಯಾಮರ, 4*100 ಮೀ ರಿಲೇ, 4*400ಮೀ ರಿಲೇ, 5000ಕಿಮೀ ನಡಿಗೆ, 400 ಮೀ ಹಡಲ್ಸ್ ಸ್ಪರ್ಧೆ ಜರುಗಲಿದೆ.