ಕರ್ನಾಟಕದ ಕ್ರೀಡಾ-ಯುವಜನ ಸಚಿವ ಪ್ರಮೋದ್ ಮಧ್ವರಾಜ್ಗೆ ಗೌರವಾರ್ಪಣೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ನ.14: ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಚಿಣ್ಣರ ಬಿಂಬ ಸಂಭ್ರಮಿಸಿದ 14ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಪ್ರದಾನ ಮತ್ತು ಸನ್ಮಾನ ಸಮಾರಂಭ ನೆರವೇರಿಸಲ್ಪಟ್ಟಿತು.
ನಡೆಸಲ್ಪಟ್ಟ ಭವ್ಯ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿüಗಳಾಗಿ ಕೆ.ಎಲ್ ಬಂಗೇರ (ಮೊಗವೀರ ವ್ಯವಸ್ಥಾಪಕ ಮಂಡಳಿ), ಹರೀಶ್ ವಾಸು ಶೆಟ್ಟಿ (ಬಂಟ್ಸ್ ಸಂಘ), ಡಾ| ಯು.ಧನಂಜಯ್ ಕುಮಾರ್ (ಬಿಲ್ಲವರ ಅಸೋಸಿಯೇಶನ್), ಸಿಎ| ಹರಿದಾಸ್ ಭಟ್ (ಬಿಎಸ್ಕೆಬಿ ಅಸೋಸಿಯೇಶನ್), ಗಿರೀಶ್ ಜಿ.ಸಾಲಿಯಾನ್ (ಕುಲಾಲ ಸಂಘ), ರವಿ ಎಸ್.ದೇವಾಡಿಗ (ದೇವಾಡಿಗರ ಸಂಘ), ಬಿ.ಮುನಿರಾಜ್ ಜೈನ್ (ಜೈನ ಸಂಘ), ನಾರಾಯಣ ಆರ್.ಮೆಂಡನ್ (ಸಾಫಲ್ಯ ಸಂಘ), ಸದಾನಂದ ಆಚಾರ್ಯ (ವಿಶ್ವಕರ್ಮ ಅಸೋಸಿಯೇಶನ್), ಸತೀಶ್ ಆರ್.ಸಲ್ಯಾನ್ (ರಜಕ ಸಂಘ), ರವಿ ಹೆಗ್ಗಡೆ (ಹೆಗ್ಗಡೆ ಸಂಘ), ಚಂದ್ರಶೇಖರ್ ಆರ್.ಬೆಳ್ಚಡ (ತೀಯಾ ಸಮಾಜ), ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ (ಗಾಣಿಗ ಸಂಘ), ರಂಗಪ್ಪ ಸಿ.ಗೌಡ (ಒಕ್ಕಲಿಗರ ಸಂಘ), ಲೀಲಾಧರ್ ಶೆಟ್ಟಿಗಾರ್ (ಪದ್ಮಶಾಲಿ ಸಂಘ) ಮತ್ತಿತರ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನೊಳಗೊಂಡು ಸಂಸ್ಥೆಯ ವತಿಯಿಂದ ಕರ್ನಾಟಕ ರಾಜ್ಯ ಕ್ರೀಡಾ ಮತ್ತು ಯುವಜನ, ಮೀನುಗಾರಿಕಾ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಬಿ.ಭಂಡಾರಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಚಿಣ್ಣರ ಬಿಂಬದ ಸ್ಥಾಪಕ ವಿಶ್ವಸ್ಥ ಮಂಡಳಿ ಸದಸ್ಯರಾದ ಸುರೇಂದ್ರ ಕುಮಾರ್ ಹೆಗ್ಡೆ, ಶ್ರೀಮತಿ ರೇಣುಕಾ ಪಿ.ಭಂಡಾರಿ, ಭಾಸ್ಕರ ಎಂ.ಶೆಟ್ಟಿ, ಕಾರ್ಯಾಧ್ಯಕ್ಷೆ ಕು| ಪೂಜಾ ಪ್ರಕಾಶ್ ಭಂಡಾರಿ, ಕಾರ್ಯಾಧ್ಯಕ್ಷೆ ಕು| ನೈನಾ ಪ್ರಕಾಶ್ ಭಂಡಾರಿ, ಕೇಂದ್ರ ಕಚೇರಿ ಸಂಚಾಲಕಗಳಾದ ತೋನ್ಸೆ ಸಂಜೀವ ಪೂಜಾರಿ, ಕಯ್ಯಾರು ರಮೇಶ್ ಡಿ.ರೈ, ಜಯಪ್ರಕಾಶ್ ಶೆಟ್ಟಿ, ವಿಜಯ್ ಕೋಟ್ಯಾನ್, ಜಗದೀಶ್ ರಾವ್, ವಿವಿಧ ಶಾಖೆಗಳ ಮುಖ್ಯಸ್ಥರುಗಳಾದ ಭಾಸ್ಕರ್ ಶೆಟ್ಟಿ ತಾಳಿಪಾಡಿ, ಜಯಪ್ರಕಾಶ್ ಶೆಟ್ಟಿ ಕಲ್ವಾ ಸೇರಿದಂತೆ ಚಿಣ್ಣರ ಬಿಂಬದ ಪದಾಧಿಕಾರಿಗಳು, ನೂರಾರು ಚಿಣ್ಣರು, ಪೆÇೀಷಕರು ಉಪಸ್ಥಿತರಿದ್ದರು.
ಆ ಮುನ್ನ ಕಲಾಸೌರಭ ಮುಂಬಯಿ ನಿರ್ದೇಶಕ ಪದ್ಮನಾಭ ಸಸಿಹಿತ್ಲು ನಿರ್ದೇಶನದಲ್ಲಿ ಕು| ಶ್ರದ್ಧಾ ಬಂಗೇರ ಸಂಗೀತ ಪ್ರಸ್ತುತ ಪಡಿಸಿದರು. ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.