ಮಂಗಳೂರು: ತನ್ವೀರ್ ಸೇಠ್ ತಪ್ಪು ಮಾಡಿದ್ದರೆ ಸೂಕ್ತ ಕ್ರಮ ತಗೊಳ್ತಿವಿ. ಆದ್ರೆ, ಅವರು ತಪ್ಪು ಮಾಡಿಲ್ಲ ಅಂತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ದಿನೇಶ್ ಗುಂಡುರಾವ್ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ತನ್ವೀರ್ ಸೇಠ್ ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಗುಂಡುರಾವ್, ಉದ್ದೇಶಪೂರ್ವಕ ಯಾವುದನ್ನೂ ನೋಡಿಲ್ಲ.
ಅಚಾನಕ್ಕಾಗಿ ವ್ಯಾಟ್ಸಪ್ ನೋಡಿದ್ದೇನೆ. ೧೫ ನಿಮಿಷ ನಾನೇನು ನೋಡಿದ್ದೇನೆಂದು ಟಿವಿಯವರಲ್ಲಿ ಎವಿಡೆನ್ಸ್ ಇದೆ ಎಂದು ತನ್ವೀರ್ ಸೇಠ್ ಹೇಳುತ್ತಿದ್ದಾರೆ ಎಂದಿದ್ದಾರೆ. ಈಗಾಗಲೇ ಸಿಐಡಿ ತನಿಖೆ ನಡೆಸಿದ್ದೇವೆ. ಸಾಕ್ಷ್ಯಾಧಾರಗಳನ್ನು ನೋಡಿ ಎಲ್ಲವನ್ನೂ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡುರಾವ್ ಸ್ಪಷ್ಟಪಡಿಸಿದ್ದಾರೆ.