ಮುಂಬಯಿ, ನ.16: ಭಾರತ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಬದಲಾವಣೆ ಯೋಜನೆಯನ್ನು ಬೆಂಬಲಿಸಿ ಪೋಟೋಗ್ರಾಫರ್ಸ್ ಅಸೋಸಿಯೇಶನ್ ನಲ್ಲಾಸೋಫರಾ-ವಿರಾರ್ ಕಳೆದ ಮಂಗಳವಾರ ಬೈಕ್ರ್ಯಾಲಿಯನ್ನು ಆಯೋಜಿಸಿತ್ತು.
ಅಸೋಸಿಯೇಶನ್ನ ರಚನಾತ್ಮಕ ಸಮಿತಿ ಮುಖ್ಯಸ್ಥ, ತುಳುಕನ್ನಡಿಗ ಮಾಜಿ ಪತ್ರಿಕಾ ಛಾಯಾಗ್ರಾಹಕ ಶಶಿಕಾಂತ್ ಎಸ್.ಶೆಟ್ಟಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಸದಸ್ಯ ಪ್ರಸನ್ನ ಶೆಟ್ಟಿ, ಅಧ್ಯಕ್ಷ ಪ್ರದೀಪ್ ಜಾಧವ್ ಸೇರಿದಂತೆ ನೂರಾರು ಪೋಟೋಗ್ರಾಫರ್ಸ್ 60ಕ್ಕೂ ಅಧಿಕ ಬೈಕ್ಗಳೊಂದಿಗೆ ಜಾಥಾ ಹಮ್ಮಿಕೊಂಡು ಮೋದಿ ಯೋಜನೆಯ ಹೊಸ 2000 ಹಾಗೂ 500ರ ನೋಟುಗಳನ್ನು ಸ್ವಾಗತಿಸಿ ಈ ಬಗ್ಗೆ ಸ್ಥಾನಿಯರಲ್ಲಿ ಅರಿವು ಮೂಡಿಸಿದರು.