ಮಂಗಳೂರು: ಕೇಂದ್ರ ಸರಕಾರ 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆದ ಪರಿಣಾಮ ಹಳೆಯ ನೋಟುಗಳ ವಿನಿಮಯಕ್ಕಾಗಿ ಬ್ಯಾಂಕುಗಳಲ್ಲಿ ಜನರ ಸರತಿ ಸಾಲು ಬುಧವಾರವೂ ಮುಂದುವರೆದಿದೆ.
ನೋಟು ಬದಲಾಯಿಸಲು ಬರುವವರನ್ನು ನಿಯಂತ್ರಿಸುವ ಸಲುವಾಗಿ ಬೆರಳಿಗೆ ಶಾಯಿ ಗುರುತು ಹಾಕುವ ವ್ಯವಸ್ಥೆ ಮಾಡುವುದಾಗಿ ಕೇಂದ್ರ ಸರಕಾರ ತಿಳಿಸಿದ್ದರೂ ಮಂಗಳೂರು, ಉಡುಪಿಯ ಯಾವುದೇ ಬ್ಯಾಂಕಿಗೆ ಈ ಶಾಯಿ ತಲುಪಿಲ್ಲ. ಹಾಗಾಗಿ ಬುಧವಾರ ನೋಟು ಬದಧಿಲಾಯಿಸಲು ಬಂದವರ ಬೆರಳಿಗೆ ಶಾಯಿ ಗುರುತು ಹಾಕಲಾಗಿಲ್ಲ.
ಶುಕ್ರವಾರ ಮಂಗಳೂರಿಗೆ ಈ ಶಾಯಿ ಬರುವ ಸಾಧ್ಯತೆ ಇದ್ದು, ಸೋಮವಾರದಿಂದ ಅಧಿಕೃತವಾಗಿ ಬೆರಳಿಗೆ ಶಾಯಿ ಗುರುತು ಹಾಕುವ ಪ್ರಕ್ರಿಯೆ ಅನುಷ್ಠಾನಕ್ಕೆ ಬರಲಿದೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ.