ಮಂಗಳೂರು: ದ.ಕ.ಜಿಲ್ಲೆಯ ಉಳ್ಳಾಲ ವ್ಯಾಪ್ತಿಯ ನಾಟೆಕಲ್ ಪರಿಸರದಲ್ಲಿ ನಡೆದುಕೊಂಡು ಹೋಗುತ್ತಿದ್ದ ೧೨ ವರ್ಷದ ಬಾಲಕನೊಬ್ಬನಿಗೆ ಓಮ್ನಿ ಕಾರಿನಲ್ಲಿ ಬಂದ ಗುಂಪೊಂದು ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ನಡೆದಿದೆ.
ಗಾಯಗೊಂಡ ಬಾಲಕನ್ನು ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಈಗಾಗಲೇ ಹಲವು ಬಾರಿ ಕೋಮು ಗಲಭೆಗೆ ಪ್ರಚೋದಿಸುವಂತಹ ಕೃತ್ಯಗಳು ನಡೆದು ಉಳ್ಳಾಲದಾದ್ಯಂತ ಪ್ರಕ್ಷ್ಯುಬ್ದ ವಾತಾವರಣ ನಿರ್ಮಾಣವಾಗಿದ್ದು, ನವೆಂಬರ್ ೨೩ರವರೆಗೆ ಸೆಕ್ಷನ್ ೧೪೪ ಜಾರಿಯಲ್ಲಿದ್ದರೂ ಇಂತಹ ಘಟನೆ ಮರುಕಳಿಸಿದ ಬಗ್ಗೆ ಸ್ಥಳೀಯರು ಆತಂಕಗೊಂಡಿದ್ದಾರೆ.