ಮಂಗಳೂರು: ಹಳೆನೋಟುಗಳ ನಿಷೇಧದ ವಿರುದ್ಧ ನ.೨೮ರಂದು ಭಾರತ್ ಬಂದ್ ನಡೆಸುವ ವಿಪಕ್ಷಗಳ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್ ಅಲ್ಲಗಳೆದಿದ್ದು, ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆಯಷ್ಟೇ ರಾಜ್ಯ ಬಂದ್ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಜೆಡಿಎಸ್ ಈ ಪ್ರತಿಭಟನೆಯಿಂದ ದೂರವಿರಲಿದ್ದು, ರಾಜ್ಯದಲ್ಲಿ ಎಡಪಕ್ಷಗಳ ಪ್ರಾಬಲ್ಯ ಇಲ್ಲದಿರುವುದರಿಂದ ಪ್ರತಿಭಟನೆಯು ಬಂದ್ ನಂತಹ ತೀಬ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿಲ್ಲ. ಕೇಂದ್ರ ಸರ್ಕಾರದ ೫೦೦ ಮತ್ತು ೧ ಸಾವಿರ ಮುಖಬೆಲೆಯ ನೋಟು ಚಲಾವಣೆ ಹಿಂಪಡೆದ ನಿರ್ಧಾರ ಖಂಡಿಸಿ ವಿಪಕ್ಷಗಳು ಸೋಮವಾರ ದೇಶಾದ್ಯಂತ ಹಮ್ಮಿಕೊಂಡಿರುವ ಆಕ್ರೋಶ ದಿವಸ್ ನ್ನು ಯಶಸ್ವಿಗೊಳಿಸಲು ಆಡಳಿತಾರೂಢ ಕಾಂಗ್ರೆಸ್ ಸಜ್ಜಾಗಿದೆ.
ಆದರೆ, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಮ್ಮ ವಿರೋಧವಿದ್ದರೂ ಆಕ್ರೋಶ್ ದಿವಸ್ ಗೆ ಬೆಂಬಲವಿಲ್ಲ ಎಂದು ಜೆಡಿಎಸ್ ಸ್ಪಷ್ಟಪಡಿಸಿದೆ.