ಮಂಗಳೂರು: ವಿದ್ಯುತ್ ಬಿಲ್ ಬಾಕಿಯಿಟ್ಟ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಹೋದ ಮೆಸ್ಕಾಂ ಸಿಬ್ಬಂದಿಗೆ ಹಲ್ಲೆ ನಡೆಸಿದ ಘಟನೆ ಮೂಡಬಿದ್ರೆಯಲ್ಲಿ ನಡೆದಿದೆ.
ಮೂಡಬಿದ್ರೆ ತಾಕೋಡೆ ನಿವಾಸಿ ಕೀರ್ತಿ ರೆನಾಲ್ಡ್ ಎಂಬವರು ಮೆಸ್ಕಾಂ ಬಿಲ್ ಪಾವತಿಸದೆ ಬಾಕಿ ಇಟ್ಟಿದ್ದರು. ಈ ಕಾರಣಕ್ಕಾಗಿ ನಿಯಮಗಳ ಪ್ರಕಾರ ಅವರ ಮನೆಯ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲು ಬಂದ ಮೆಸ್ಕಾಂ ಸಿಬ್ಬಂದಿಯಾದ ಪಪ್ಪು ಅವರೊಂದಿಗೆ ತಗಾದೆಗಿಳಿದು ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿರುವುದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕೀರ್ತಿ ರೆನಾಲ್ಡ್ ಅವರನ್ನು ಮೂಡಬಿದ್ರೆ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ.