ಮಂಗಳೂರು: ನವಮಂಗಳೂರು ಬಂದರು ಖಾಸಗೀಕರಣವಿಲ್ಲ. ಸರಕಾರದ ಮುಂದೆ ಇಂತಹ ಪ್ರಸ್ತಾವನೆ ಬಂದಿಲ್ಲ. ಈ ಪ್ರಸ್ತಾವನೆಗೆ ನನ್ನ ಸ್ಪಷ್ಟ ವಿರೋಧವಿದೆ ಎಂದು ಸಂಸದ ನಳಿನ್ ಕುಮಾರ ಕಟೀಲು ನುಡಿದರು.
ಸುರತ್ಕಲ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಂದರು ಮಂಡಳಿ ಬಂದರಿನಲ್ಲಿನ ಬರ್ತ್ ನಿರ್ವಹಣೆಗೆ ಖಾಸಗೀ ಸಂಸ್ಥೆಗಳಿಂದ ಟೆಂಡರ್ ಕರೆದಿದ್ದು, ಇದು ಇನ್ನೂ ಟೆಂಡರ್ ಹಂತದಲ್ಲಿದೆ ಎಂದು ಅವರು ಹೇಳಿದರು.ಕೈಗಾರಿಕಾ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸುರತ್ಕಲ್ ಹಾಗೂ ಮೂಲ್ಕಿ ಕೊಂಕಣ ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ದೊರೆಯುವಂತಾಗಲು ಈ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವಂತೆ ರೈಲ್ವೇ ಸಚಿವ ಸುರೇಶ್ ಪ್ರಭು ಅವರಿಗೆ ಮನವಿ ಸಲ್ಲಿಸಿದ್ದು, ಮುಂದಿನ ಬಜೆಟ್ನಲ್ಲಿ ಬೇಡಿಕೆ ಈಡೇರುವ ಭರವಸೆ ಇದೆ ಎಂದು ಅವರು ಹೇಳಿದರು.ಹಳೆಯಂಗಡಿಯಲ್ಲಿ ರೈಲ್ವೇ ಮೇಲ್ಸೇತುವೆ ಯೋಜನೆ ಮಂಜೂರಾತಿಗೆ ರೈಲ್ವೇ ಇಲಾಖೆ ಬದ್ದವಾಗಿದೆ.
ಈ ಯೋಜನೆ ಮಂಜೂರಾತಿಗೆ ರಾಜ್ಯ ಸರಕಾರ ಸೂಕ್ತ ಸ್ಥಳ ಒದಗಿಸಿಕೊಡಬೇಕು ಎಂದರು.