ಮಂಗಳೂರು: ಕೇಂದ್ರ ಸರ್ಕಾರ ಬದಲಿ ವ್ಯವಸ್ಥೆ ಮಾಡದೆ ೫೦೦ ಮತ್ತು ೧ ಸಾವಿರ ರೂ. ನೋಟು ಅಮಾನ್ಯ ಮಾಡಿರುವುದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಿಂದ ಮಂಗಳೂರಿನ ಪುರಭವನದ ಮುಂದೆ ಪ್ರತಿಭಟನೆ ನಡೆಯಿತು.
ಈ ವೇಳೆ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಮತಾನಾಡಿ, ಕೇಂದ್ರ ಸರ್ಕಾರದ ನೀತಿಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಬಡವರು ಮಾತ್ರ ಬ್ಯಾಂಕ್ ಮುಂದೆ ಅಲೆದಾಡುತ್ತಿದ್ದಾರೆ. ಹೊರತು ಶ್ರೀಮಂತರನ್ನು ಕಾಣಲು ಅಸಾಧ್ಯ.ನೋಟು ನಿಷೇಧಕ್ಕೆ ನಮ್ಮ ಬೆಂಬಲವಿದೆ.
ಆದ್ರೆ, ಈ ಬಗೆಗಿಗ ಸಮಸ್ಯೆ ಪರಿಹರಿಸುವಲ್ಲಿ ಮೋದಿ ವಿಫಲವಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು ಆಕ್ರೋಶ ದಿವಸ್ ಆಚರಣೆ ಮಾಡಲು ಪ್ರತಿಪಕ್ಷಗಳು ಕರೆ ನೀಡಿದಾಗ ಬಿಜೆಪಿ ಸಂಭ್ರಮಾಚರಣೆ ಮಾಡುತ್ತಿದೆ. ಇದು ಖಂಡನೀಯ ಎಂದು ಅವರು ಹೇಳಿದರು.