ಮಂಗಳೂರು: ಅಪ್ರಾಪ್ತ ಬಾಲಕರಿಬ್ಬರು ಸೇರಿಕೊಂಡು ಒಂದೇ ರಾತ್ರಿಯಲ್ಲಿ ಎರಡು ಅಂಗಡಿಗಳಿಗೆ ನುಗ್ಗಿ ಕಳ್ಳತನ ನಡೆಸಿರುವ ಘಟನೆ ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ತಿಂಗಳಾಡಿಯಲ್ಲಿ ನಡೆದಿದೆ. ತಿಂಗಳಾಡಿಯ ಜಗನ್ನಾಠ್ ಎಂಬವರ ಅಂಗಡಿಯ ಬಾಗಿಲು ಮುರಿದು ಒಳ ನುಗ್ಗಿ ಕಳ್ಳತನ ನಡೆಸಿದರೆ ಸಮೀಪದ ಮುಹಮ್ಮದ್ ಕುಂಞಿ ಎಂಬವರ ಅಂಗಡಿಯ ಹೆಂಚು ತೆಗೆದು ಒಳ ನುಗ್ಗಿದ ಕಳ್ಳತನ ನಡೆಸಿದ್ದಾರೆ.
ಕಳ್ಳತನ ನಡೆಸಿರುವ ಅಪ್ರಾಪ್ತ ಮಕ್ಕಳ ಪೈಕಿ ಓರ್ವ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದು, ವಿಚಾರಣೆ ನಡೆಸಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೊಬ್ಬನನ್ನು ಆತನ ಮನೆಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಬಾಲಕರು ಅಂದಾಜಿ ೧೪ ರಿಂದ ೧೫ ವರ್ಷ ಪ್ರಾಯದವರಾಗಿದ್ದು, ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.