ಮಂಗಳೂರು: ಎತ್ತಿನಹೊಳೆ ಯೋಜನೆ ವಿರುದ್ಧ ಡಿಸೆಂಬರ್ ೧೦ರಿಂದ ೧೨ರವರೆಗೆ ನಡೆಯುವ ರಥಯಾತ್ರೆಯಲ್ಲಿ ಜಿಲ್ಲೆಯಲ್ಲಿ ಹರಿಯುವ ಐದು ಪವಿತ್ರ ನದಿಗಳ ತೀರ್ಥವನ್ನು ರಥದಲ್ಲಿರುವ ಕಲಶಕ್ಕೆ ಹಾಕಿ, ಜಿಲ್ಲೆಯ ೫ ತಾಲೂಕು ಹಾಗೂ ೮ ವಿಧಾನಸಭಾ ಕ್ಷೇತ್ರದಲ್ಲಿ ರಥಯಾತ್ರೆ ನಡೆಯಲಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ರು. ಅವರು ಬೆಳ್ತಂಗಡಿ ತಾಲೂಕಿನ ಲಾಯಿಲಾ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಡಿಸೆಂಬರ್ ೧೦ರಂದು ಸುಬ್ರಹ್ಮಣ್ಯದಿಂದ ಹೊರಡುವ ಈ ರಥಯಾತ್ರೆ ಧರ್ಮಸ್ಥಳ, ಬೆಳ್ತಂಗಡಿ, ಕಲ್ಲಡ್ಕ, ಕದ್ರಿ, ಸುರತ್ಕಲ್ ಮೂಲಕ ಸಾಗಿ ಡಿಸೆಂಬರ್ ೧೨ರಂದು ಕಟೀಲಿನಲ್ಲಿ ಸಮಾಪನಗೊಳ್ಳಲಿದೆ. ಈ ಮೂಲಕ ಎತ್ತಿನಹೊಳೆ ಹೋರಾಟ ಇನ್ನಷ್ಠು ಬಲಗೊಳ್ಳಲಿದೆ ಎಂದು ಹೇಳಿದರು. ಸಮಾಲೋಚನಾ ಸಭೆಯಲ್ಲಿ ಎಲ್ಲಾ ಜಾತಿ, ಧರ್ಮ, ಪಕ್ಷದ ಮುಖಂಡರು ಉಪಸ್ಥಿತರಿದ್ದರು.