ಮಂಗಳೂರು: ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜೆರೆ ಪೇಟೆಯಲ್ಲಿರುವ ದಮಾಸ್ ಜ್ಯುವೆಲ್ಲರಿ ಅಂಗಡಿಯ ಶಟರ್ ಮುರಿದು ಜೂ.೧೦ರಂದು ರಾತ್ರಿ ಕಳವಿಗೆ ಯತ್ನಿಸಿದ್ದು ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಧುಗಿರಿ ತುಮಕೂರು ಮೇಕೆ ಬಂಡೆಮನೆ ನಿವಾಸಿಗಳಾದ ಮಂಜುನಾಥ ಯಾನೆ ಕೋಳಿ ಮಂಜ(೪೯) ಮಹಾಂತೇಶ್(೨೧) ಬಂಧಿತ ಆರೋಪಿಗಳು. ಕಾರ್ಯಾಚರಣೆಗೆ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ, ಉಪಾಧೀಕ್ಷಕ, ಬೆಳ್ತಂಗಡಿ ವೃತ್ತ ನಿರೀಕ್ಷಕ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಎಸ್.ಐ. ರವಿ ಬಿ.ಎಸ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ತಂಡಗಳನ್ನು ರಚಿಸಿ ಬಲೆ ಬೀಸಿದ್ದರು.
ಈ ಬಗ್ಗೆ ವಿಶೇಷ ಮಾಹಿತಿ ಕಲೆ ಹಾಕಿ ಮಧುಗಿರಿ ಎಂಬಲ್ಲಿಂದ ಡಿ.೧೧ರಂದು ವಶಕ್ಕೆ ಪಡೆದುಕೊಂಡು ಕೃತ್ಯಕ್ಕೆ ಬಳಸಿದ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.