ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ (ಜಾತ್ಯಾತೀತ) ಇದರ ಸಂಘಟನಾ ಕಾರ್ಯದರ್ಶಿಯಾಗಿ ಕಿಶೋರ್ ಶೆಟ್ಟಿ ಅರಸಿನಮಕ್ಕಿ ನೇಮಕಗೊಂಡಿದ್ದಾರೆ.
ಬೆಳ್ತಂಗಡಿಯ ಜೆಡಿಎಸ್ ಮಖಂಡ ಅಡ್ಕಾಡಿ ಜಗನ್ನಾಥ ಗೌಡ ಶಿಫಾರಸಿನಮೇರೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ಕುಂಞ ಆದೇಶದಂತೆ ಯುವ ವಿಭಾಗದ ಅದ್ಯಕ್ಷ ಅಕ್ಷಿತ್ ಸುವರ್ಣ ನೇಮಕಗೊಳಿಸಿದ್ದಾರೆ. ಕಿಶೋರ್ಶೆಟ್ಟಿ, ನಮ್ಮ ಅರಸಿನಮಕ್ಕಿ ಸೇವಾಟ್ರಸ್ಟ್ ಇದರ ಕಾರ್ಯದರ್ಶಿಯಾಗಿ, ಬೆಳ್ತಂಗಡಿ ಯುವ ಬಂಟರ ವಿಭಾಗದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.