ಉಳ್ಳಾಲ: ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ಚರ್ಚಿನಲ್ಲಿ ಶನಿವಾರ ಕ್ರಿಸ್ಮಸ್ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸುವ ಮೂಲಕ ಸರ್ವರಿಗೂ ಕ್ರಿಸ್ಮಸ್ ಹಬ್ಬದ ಶುಭಾಷಯಗಳನ್ನು ಸಲ್ಲಿಸಿದರು.
ಕ್ರಿಸ್ಮಸ್ ಹಬ್ಬ ಶಾಂತಿಯ ಸಂಕೇತವಾಗಿ ಹೊರಹೊಮ್ಮಲಿ. ಕ್ರೈಸ್ತ ಬಾಂಧವರು ವಿಶೇಷವಾಗಿ ಆಚರಿಸುವ ಹಬ್ಬ ಸರ್ವಧರ್ಮವರಿಗೂ ಅದ್ಧೂರಿಯ ವಾತಾವರಣವನ್ನು ಮೂಡಿಸಿದೆ. ಹೊಸ ವರ್ಷದ ಅಭಿನಂದನೆಗಳನ್ನು ಸಲ್ಲಿಸಿದ ಅವರು ತೊಕ್ಕೊಟ್ಟು ಓವರ್ಬ್ರಿಡ್ಜ್ ಮೂಲಕ ಒಳಪೇಟೆಯಾಗಿ, ಅಲಂಕರಿಸಲಾದ ವಿದ್ಯುತ್ ಅಲಂಕೃತ ದೀಪಗಳ ಸಾಲನ್ನು ಸಚಿವರು ಉದ್ಘಾಟಿಸಿದರು. ಚರ್ಚ್ ವಠಾರದಲ್ಲಿ ಸಿ.ಎಲ್.ಸಿ ಸಮುದಾಯದವರಿಂದ ಕ್ರಿಸ್ ಮಸ್ ಗೋದಲಿಯನ್ನು ರಚಿಸಲಾಗಿತ್ತು.
ಈ ವೇಳೆ ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ಮಾಜಿ ಅಧ್ಯಕ್ಷ ಬಾಝಿಲ್ ಡಿಸೋಜಾ, ಚಚ್ ್ನ ಧರ್ಮಗುರು ಫಾ.ಜೆ.ಬಿ. ಸಲ್ದಾನ ಹಾಗೂ ಪೆರ್ಮನ್ನೂರು ಸ್ಪೋಟ್ರ್ಸ್ ಕ್ಲಬ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಾಯರ್ ಮುಜಮ್ಮಅï ಮೀಲಾದ್ ರ್ಯಾಲಿ ಹುಬ್ಬುರ್ರಸೂಲ್ ಸಮ್ಮೇಳನ ಪ್ರಯುಕ್ತ ಬಾಯರ್ ಮುಜಮ್ಮಅïದಿಂದ ಉಪ್ಪಳ ಜಂಕ್ಷನ್